ಇದೇ ಪ್ರಕರಣದ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು, ‘1 ಎಕರೆ 6 ಗುಂಟೆ ಭೂಮಿಯನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. 1 ಎಕರೆ 6 ಗುಂಟೆ ಜಾಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಕೊಳಚೆ ನಿರ್ಮೂಲನಾ ಮಂಡಳಿ 2016ರಲ್ಲೇ ಮನವಿ ಸಲ್ಲಿಸಿದೆ. ಭೂಮಿ ಹಸ್ತಾಂತರವಾದರೆ ಸಮಸ್ಯೆ ಇತ್ಯರ್ಥವಾಗಲಿದೆ. ಗುಡಿಸಿಲು ನಾಶ ಘಟನೆಯ ತನಿಖೆಯ ಮೇಲ್ವಿಚಾರಣೆಯನ್ನೂ ನ್ಯಾಯಾಲಯ ಮಾಡಬೇಕು’ ಎಂದು ಕೋರಿದರು.