<p>ಪ್ರಜಾವಾಣಿ ವಾರ್ತೆ</p>.<p>ಬೆಂಗಳೂರು: <strong>ಹೈಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹55 ಲಕ್ಷ ವಂಚಿಸಿದ್ದ ಏಳು ಆರೋಪಿಗಳ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.<br><br>ಸುದರ್ಶನ್ ಅಡ್ಯಂತಾಯ, ಅರ್ಜುನ್ ಅಡ್ಯಂತಾಯ, ಲವಿನಾ ಜನೆಟ್ ಮೆಂಟೆರೊ, ಜೈಸನ್ ಡಿಸೋಜಾ, ಮಹೇಂದ್ರ ಎಸ್. ಕಾಂಚನ್, ಪಿ.ಪಿ.ರಾಕೇಶ್, ನೆಲ್ಸನ್ ವಿರುದ್ಧ ಪ್ರಕರಣ ದಾಖಲಾಗಿದೆ.</strong></p>.<p><strong>‘ಸಿ.ಎಂ. ಸುಮಿತ್ ಕುಮಾರ್ ಅವರು ₹8 ಲಕ್ಷ, ಜಿ.ಶಿವಕುಮಾರ್ ₹8 ಲಕ್ಷ, ಎಂ.ಎಸ್.ಮಹಿಮಾ ಅವರು ₹11 ಲಕ್ಷ, ಬಿ.ಆರ್.ಹರ್ಷಾ ಅವರು ₹15 ಲಕ್ಷ, ಹರ್ಷಿತಾ ಶ್ರೀನಿವಾಸ್ ₹13 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದರು. ಒಟ್ಟು ₹55 ಲಕ್ಷ ಪಡೆದು ಆರೋಪಿಗಳು ವಂಚಿಸಿದ್ದಾರೆ’ ಎಂದು ದೂರು ನೀಡಲಾಗಿದೆ.</strong></p>.<p><strong>ಹೈಕೋರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರೋಪಿಗಳು ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಲಾಗಿದೆ. ಇದೇ ಪ್ರಕರಣದಲ್ಲಿ ಸಿಸಿಬಿಯಲ್ಲೂ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಎಫ್ಐಆರ್ ಅನ್ನು ಅವರಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಬೆಂಗಳೂರು: <strong>ಹೈಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹55 ಲಕ್ಷ ವಂಚಿಸಿದ್ದ ಏಳು ಆರೋಪಿಗಳ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.<br><br>ಸುದರ್ಶನ್ ಅಡ್ಯಂತಾಯ, ಅರ್ಜುನ್ ಅಡ್ಯಂತಾಯ, ಲವಿನಾ ಜನೆಟ್ ಮೆಂಟೆರೊ, ಜೈಸನ್ ಡಿಸೋಜಾ, ಮಹೇಂದ್ರ ಎಸ್. ಕಾಂಚನ್, ಪಿ.ಪಿ.ರಾಕೇಶ್, ನೆಲ್ಸನ್ ವಿರುದ್ಧ ಪ್ರಕರಣ ದಾಖಲಾಗಿದೆ.</strong></p>.<p><strong>‘ಸಿ.ಎಂ. ಸುಮಿತ್ ಕುಮಾರ್ ಅವರು ₹8 ಲಕ್ಷ, ಜಿ.ಶಿವಕುಮಾರ್ ₹8 ಲಕ್ಷ, ಎಂ.ಎಸ್.ಮಹಿಮಾ ಅವರು ₹11 ಲಕ್ಷ, ಬಿ.ಆರ್.ಹರ್ಷಾ ಅವರು ₹15 ಲಕ್ಷ, ಹರ್ಷಿತಾ ಶ್ರೀನಿವಾಸ್ ₹13 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದರು. ಒಟ್ಟು ₹55 ಲಕ್ಷ ಪಡೆದು ಆರೋಪಿಗಳು ವಂಚಿಸಿದ್ದಾರೆ’ ಎಂದು ದೂರು ನೀಡಲಾಗಿದೆ.</strong></p>.<p><strong>ಹೈಕೋರ್ಟ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆರೋಪಿಗಳು ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಲಾಗಿದೆ. ಇದೇ ಪ್ರಕರಣದಲ್ಲಿ ಸಿಸಿಬಿಯಲ್ಲೂ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಎಫ್ಐಆರ್ ಅನ್ನು ಅವರಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>