<p><strong>ಆನೇಕಲ್: </strong>ಬನ್ನೇರುಘಟ್ಟ ಜೈವಿಕ ಉದ್ಯಾನದ ನೀರಾನೆ (ಹಿಪ್ಪೋಪೊಟಾಮಸ್) ದಶ್ಯಾ ಮರಿಯೊಂದಕ್ಕೆ ಶುಕ್ರವಾರ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೂತನ ಅತಿಥಿಯ ಆಗಮನದಿಂದ ನೀರಾನೆಗಳ ಸಂಖ್ಯೆಯು 8ಕ್ಕೇರಿದೆ. 11 ವರ್ಷದ ದಶ್ಯಾ ಮತ್ತು 17 ವರ್ಷದ ನಾಗ ನೀರಾನೆ ಜೋಡಿಗೆ ಜನಿಸಿರುವ ಮರಿಯಾಗಿದೆ. ಇದು ಎರಡನೇ ಮರಿಯಾಗಿದೆ. 2018ರಲ್ಲಿ ಅಲೋಕ್ ಎಂಬ ಗಂಡು ಮರಿಗೆ ಜನ್ಮ ನೀಡಿತ್ತು.</p>.<p>ತೇಜಾ, ನಾಗ, ಕಾರ್ತಿಕ್, ಅಲೋಕ್ ಸೇರಿ ಒಟ್ಟು 8 ನೀರಾನೆಗಳ ಕುಟುಂಬ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದೆ. ನೀರಾನೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾಣಿ ವಿನಿಮಯ ಮಾಡಿಕೊಳ್ಳುವ ಚಿಂತನೆಯಲ್ಲಿ ಉದ್ಯಾನವಿದೆ ಎಂದು ತಿಳಿಸಿದರು.</p>.<p>ಉದ್ಯಾನದ ವೈದ್ಯ ಡಾ.ಉಮಾಶಂಕರ್ ಮಾಹಿತಿ ನೀಡಿ, ’ನೀರಾನೆಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ನೀರಾನೆಗೆ ನೀಡುವ ಬೂಸದ ಜೊತೆಗೆ ವಿಟಮಿನ್ ಎ ಮತ್ತು ಖನಿಜಾಂಶದ ಪುಡಿಯನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದರಿಂದ ಬಾಣಂತಿ ನೀರಾನೆಗೆ ಹೆಚ್ಚಿನ ಪೌಷ್ಠಿಕ ಆಹಾರ ದೊರೆಯುತ್ತದೆ. ಬೂಸದ ಜೊತೆಗೆ ಗೆಣಸು, ಕ್ಯಾರೆಟ್, ಹುಲ್ಲು ನೀಡುವ ಮೂಲಕ ಜತನದಿಂದ ನೋಡಿಕೊಳ್ಳಲಾಗುತ್ತಿದೆ‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಬನ್ನೇರುಘಟ್ಟ ಜೈವಿಕ ಉದ್ಯಾನದ ನೀರಾನೆ (ಹಿಪ್ಪೋಪೊಟಾಮಸ್) ದಶ್ಯಾ ಮರಿಯೊಂದಕ್ಕೆ ಶುಕ್ರವಾರ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.</p>.<p>ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೂತನ ಅತಿಥಿಯ ಆಗಮನದಿಂದ ನೀರಾನೆಗಳ ಸಂಖ್ಯೆಯು 8ಕ್ಕೇರಿದೆ. 11 ವರ್ಷದ ದಶ್ಯಾ ಮತ್ತು 17 ವರ್ಷದ ನಾಗ ನೀರಾನೆ ಜೋಡಿಗೆ ಜನಿಸಿರುವ ಮರಿಯಾಗಿದೆ. ಇದು ಎರಡನೇ ಮರಿಯಾಗಿದೆ. 2018ರಲ್ಲಿ ಅಲೋಕ್ ಎಂಬ ಗಂಡು ಮರಿಗೆ ಜನ್ಮ ನೀಡಿತ್ತು.</p>.<p>ತೇಜಾ, ನಾಗ, ಕಾರ್ತಿಕ್, ಅಲೋಕ್ ಸೇರಿ ಒಟ್ಟು 8 ನೀರಾನೆಗಳ ಕುಟುಂಬ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದೆ. ನೀರಾನೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾಣಿ ವಿನಿಮಯ ಮಾಡಿಕೊಳ್ಳುವ ಚಿಂತನೆಯಲ್ಲಿ ಉದ್ಯಾನವಿದೆ ಎಂದು ತಿಳಿಸಿದರು.</p>.<p>ಉದ್ಯಾನದ ವೈದ್ಯ ಡಾ.ಉಮಾಶಂಕರ್ ಮಾಹಿತಿ ನೀಡಿ, ’ನೀರಾನೆಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ನೀರಾನೆಗೆ ನೀಡುವ ಬೂಸದ ಜೊತೆಗೆ ವಿಟಮಿನ್ ಎ ಮತ್ತು ಖನಿಜಾಂಶದ ಪುಡಿಯನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದರಿಂದ ಬಾಣಂತಿ ನೀರಾನೆಗೆ ಹೆಚ್ಚಿನ ಪೌಷ್ಠಿಕ ಆಹಾರ ದೊರೆಯುತ್ತದೆ. ಬೂಸದ ಜೊತೆಗೆ ಗೆಣಸು, ಕ್ಯಾರೆಟ್, ಹುಲ್ಲು ನೀಡುವ ಮೂಲಕ ಜತನದಿಂದ ನೋಡಿಕೊಳ್ಳಲಾಗುತ್ತಿದೆ‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>