ಉದ್ಯಾನದ ವೈದ್ಯ ಡಾ.ಉಮಾಶಂಕರ್ ಮಾಹಿತಿ ನೀಡಿ, ’ನೀರಾನೆಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ನೀರಾನೆಗೆ ನೀಡುವ ಬೂಸದ ಜೊತೆಗೆ ವಿಟಮಿನ್ ಎ ಮತ್ತು ಖನಿಜಾಂಶದ ಪುಡಿಯನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದರಿಂದ ಬಾಣಂತಿ ನೀರಾನೆಗೆ ಹೆಚ್ಚಿನ ಪೌಷ್ಠಿಕ ಆಹಾರ ದೊರೆಯುತ್ತದೆ. ಬೂಸದ ಜೊತೆಗೆ ಗೆಣಸು, ಕ್ಯಾರೆಟ್, ಹುಲ್ಲು ನೀಡುವ ಮೂಲಕ ಜತನದಿಂದ ನೋಡಿಕೊಳ್ಳಲಾಗುತ್ತಿದೆ‘ ಎಂದು ತಿಳಿಸಿದರು.