ಹಣಕ್ಕೆ ಪೀಡಿಸಿದ್ದ ಪೊಲೀಸರು: ‘ಸಂತ್ರಸ್ತ ಶ್ರೀಧರ್ ಅವರನ್ನು ಬೆದರಿಸಿದ್ದ ಶೇಷಾದ್ರಿಪುರ ಠಾಣೆ ಪೊಲೀಸರು, ಹಣ ನೀಡುವಂತೆ ಪೀಡಿಸುತ್ತಿದ್ದರು. ಹಣ ನೀಡಲು ಶ್ರೀಧರ್ ಒಪ್ಪಿರಲಿಲ್ಲ. ಗುರುವಾರ (ಜ. 19) ಬೆಳಿಗ್ಗೆ 10.30ರ ಸುಮಾರಿಗೆ ಅವರನ್ನು ಹಿಡಿದುಕೊಂಡು ಠಾಣೆಗೆ ಕರೆದೊಯ್ದಿದ್ದರು. ಶುಕ್ರವಾರ ಸಂಜೆ 4 ಗಂಟೆಯವರೆಗೂ ಠಾಣೆಯಲ್ಲಿ ಕೂರಿಸಿದ್ದರು. ಹಣಕ್ಕಾಗಿ ಪುನಃ ಪೀಡಿಸಿ ಕಿರುಕುಳ ನೀಡಿದ್ದರು’ ಎಂದು ಮೂಲಗಳು ಹೇಳಿವೆ.