‘ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗಿರಿಜಾ ಹಾಗೂ ಪೋಷಕರು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಯಶವಂತಪುರದಲ್ಲಿ ನೆಲೆಸಿದ್ದರು. ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ನವೀನ್ ಕುಮಾರ್, ನಗರದ ಬೇಕರಿಗಳಿಗೆ ಬ್ರೆಡ್ ವಿತರಣೆ ಕೆಲಸ ಮಾಡುತ್ತಿದ್ದ. ಗಿರಿಜಾ ಹಾಗೂ ನವೀನ್ಕುಮಾರ್ ನಡುವೆ ಪರಿಚಯವಾಗಿ, ಸ್ನೇಹ ಏರ್ಪಟ್ಟಿತ್ತು. ಮದುವೆಯಾಗಲು ತೀರ್ಮಾನಿಸಿದ್ದರು. ಎರಡೂ ಕುಟುಂಬದವರು ಮದುವೆಗೆ ಒಪ್ಪಿಗೆ ನೀಡಿದ್ದರು’ ಎಂದು ತಿಳಿಸಿದರು.