<p><strong>ಬೆಂಗಳೂರು</strong>: ಎರಡನೇ ಮದುವೆಯಾದರೆಂಬ ಕಾರಣಕ್ಕೆ ತಮ್ಮ ಗಂಡನನ್ನೇ ಅಪಹರಿಸಲು ಮೊದಲ ಪತ್ನಿ ಸುಫಾರಿ ನೀಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಾಗಲಗುಂಟೆ ಪೊಲೀಸರು, ಆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.</p>.<p>ಹೆಸರುಘಟ್ಟದ ಅಭಿಷೇಕ್ (26), ಬಾಗಲಗುಂಟೆಯ ಭರತ್ (25), ಜೆ.ಪಿ.ನಗರದ ಪ್ರಕಾಶ್ (22) ಹಾಗೂ ಚಲುವಮೂರ್ತಿ (22) ಬಂಧಿತರು.</p>.<p>‘ಸಿಡೇದಹಳ್ಳಿ ಮುಖ್ಯರಸ್ತೆಯ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಶಾಹೀದ್ ಷೇಕ್ (31) ಎಂಬುವರು ಎರಡನೇ ಪತ್ನಿ ರತ್ನ ಕಾತುಮ್ ಜೊತೆ ಜೂನ್ 7ರಂದು ಎಂ.ಇ.ಐ ಬಡಾವಣೆಯ ಆರ್ಚ್ ಬಳಿ ತರಕಾರಿ ತರಲು ಹೋಗಿದ್ದರು. ಕಾರಿನಲ್ಲಿ ಬಂದಿದ್ದ ಆರೋಪಿಗಳು, ಶಾಹೀದ್ ಅವರನ್ನು ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ಪತ್ನಿ ರತ್ನ, ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಜೂನ್ 8ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿ.ಜಿ.ಎಸ್ ಟೋಲ್ ಹತ್ತಿರ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದೂ ತಿಳಿಸಿದರು.</p>.<p>‘ರೋಮಾ ಷೇಕ್ ಎಂಬುವರನ್ನು ಮದುವೆಯಾಗಿದ್ದ ಶಾಹೀದ್, ಅವರಿಂದ ದೂರವಾಗಿದ್ದರು. ಇತ್ತೀಚೆಗಷ್ಟೇ ರತ್ನ ಕಾತುಮ್ ಅವರನ್ನು ಎರಡನೇ ಮದುವೆ ಆಗಿದ್ದರು. ಅದರಿಂದ ಕೋಪಗೊಂಡ ರೋಮಾ, ಗಂಡನನ್ನು ಅಪಹರಿಸುವಂತೆ ಪರಿಚಯಸ್ಥ ಸಲ್ಮಾನ್ ಎಂಬುವರಿಗೆ ಸುಫಾರಿ ನೀಡಿದ್ದರು.’</p>.<p>‘ಗಂಡನನ್ನು ಅಪಹರಿಸಿ ತಮ್ಮ ಬಳಿ ತಂದು ಬಿಡುವಂತೆ ರೋಮಾ ಹೇಳಿದ್ದರು. ಆದರೆ, ಆರೋಪಿಗಳು ಶಾಹೀದ್ನನ್ನು ಬೇರೆಡೆ ಕರೆದೊಯ್ದು ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಲೆಗೂ ಯತ್ನಿಸಿದ್ದರು’ ಎಂದು ಪೊಲೀಸರು ವಿವರಿಸಿದರು.</p>.<p>‘ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಅವರ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎರಡನೇ ಮದುವೆಯಾದರೆಂಬ ಕಾರಣಕ್ಕೆ ತಮ್ಮ ಗಂಡನನ್ನೇ ಅಪಹರಿಸಲು ಮೊದಲ ಪತ್ನಿ ಸುಫಾರಿ ನೀಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಾಗಲಗುಂಟೆ ಪೊಲೀಸರು, ಆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.</p>.<p>ಹೆಸರುಘಟ್ಟದ ಅಭಿಷೇಕ್ (26), ಬಾಗಲಗುಂಟೆಯ ಭರತ್ (25), ಜೆ.ಪಿ.ನಗರದ ಪ್ರಕಾಶ್ (22) ಹಾಗೂ ಚಲುವಮೂರ್ತಿ (22) ಬಂಧಿತರು.</p>.<p>‘ಸಿಡೇದಹಳ್ಳಿ ಮುಖ್ಯರಸ್ತೆಯ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಶಾಹೀದ್ ಷೇಕ್ (31) ಎಂಬುವರು ಎರಡನೇ ಪತ್ನಿ ರತ್ನ ಕಾತುಮ್ ಜೊತೆ ಜೂನ್ 7ರಂದು ಎಂ.ಇ.ಐ ಬಡಾವಣೆಯ ಆರ್ಚ್ ಬಳಿ ತರಕಾರಿ ತರಲು ಹೋಗಿದ್ದರು. ಕಾರಿನಲ್ಲಿ ಬಂದಿದ್ದ ಆರೋಪಿಗಳು, ಶಾಹೀದ್ ಅವರನ್ನು ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ಪತ್ನಿ ರತ್ನ, ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಜೂನ್ 8ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿ.ಜಿ.ಎಸ್ ಟೋಲ್ ಹತ್ತಿರ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದೂ ತಿಳಿಸಿದರು.</p>.<p>‘ರೋಮಾ ಷೇಕ್ ಎಂಬುವರನ್ನು ಮದುವೆಯಾಗಿದ್ದ ಶಾಹೀದ್, ಅವರಿಂದ ದೂರವಾಗಿದ್ದರು. ಇತ್ತೀಚೆಗಷ್ಟೇ ರತ್ನ ಕಾತುಮ್ ಅವರನ್ನು ಎರಡನೇ ಮದುವೆ ಆಗಿದ್ದರು. ಅದರಿಂದ ಕೋಪಗೊಂಡ ರೋಮಾ, ಗಂಡನನ್ನು ಅಪಹರಿಸುವಂತೆ ಪರಿಚಯಸ್ಥ ಸಲ್ಮಾನ್ ಎಂಬುವರಿಗೆ ಸುಫಾರಿ ನೀಡಿದ್ದರು.’</p>.<p>‘ಗಂಡನನ್ನು ಅಪಹರಿಸಿ ತಮ್ಮ ಬಳಿ ತಂದು ಬಿಡುವಂತೆ ರೋಮಾ ಹೇಳಿದ್ದರು. ಆದರೆ, ಆರೋಪಿಗಳು ಶಾಹೀದ್ನನ್ನು ಬೇರೆಡೆ ಕರೆದೊಯ್ದು ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊಲೆಗೂ ಯತ್ನಿಸಿದ್ದರು’ ಎಂದು ಪೊಲೀಸರು ವಿವರಿಸಿದರು.</p>.<p>‘ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಅವರ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>