<p><strong>ಬೆಂಗಳೂರು:</strong> ನಗರದ ಪ್ರತಿಷ್ಠಿತ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ (ಐಐಎಂಬಿ) ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗದವರಿಗೆ (ಇಡಬ್ಲ್ಯುಎಸ್) ನೀಡುವ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ.</p>.<p>ಐಐಎಂಬಿಗೆ ಈಚೆಗ ಪ್ರವೇಶಾತಿ ಕೊನೆಗೊಂಡಿದ್ದು, ತರಗತಿಗಳೂ ಆರಂಭವಾಗಿವೆ. ಇಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿಯೇ ಪ್ರವೇಶಾತಿ ನಡೆದಿದೆ. ಹೀಗಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುವಂತಾಗಿದೆ.</p>.<p>‘ಮೀಸಲಾತಿಯನ್ನು ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಹಜವಾಗಿ ಹೆಚ್ಚುವುದರಿಂದ ಮೂಲಸೌಲಭ್ಯ ಹೆಚ್ಚಿಸಬೇಕು, ಬೋಧಕರ ಸಂಖ್ಯೆಯನ್ನೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಅಗತ್ಯವಿದೆ’ ಎಂದು ಐಐಎಂಬಿನಿರ್ದೇಶಕ ಪ್ರೊ.ಜಿ.ರಘುರಾಂ ಹೇಳಿದರು.</p>.<p>‘ಈ ವರ್ಷ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ 10 ಮಂದಿಗೆ ಪ್ರವೇಶ ನೀಡಲಾಗಿದೆ. ಆದರೆ ಎಕ್ಸಿಕ್ಯೂಟಿವ್ ಎಂಬಿಎ ಪ್ರೋಗ್ರಾಂನಲ್ಲಿ ಈ ಕೋಟಾವನ್ನು ಹೇಗೆ ಜಾರಿಗೆ ತರಬಹುದು ಎಂಬುದರ ಬಗ್ಗೆ ಇನ್ನಷ್ಟು ಚಿಂತನೆ ನಡೆಸುವ ಅಗತ್ಯ ಇದೆ. ಏಕೆಂದರೆ ಹೀಗೆ ಬರುವ ಅಭ್ಯರ್ಥಿಗಳು ಈಗಾಗಲೇ ಕೆಲಸದ ಅನುಭವ ಹೊಂದಿರುವವರು ಮತ್ತು ಅಧಿಕ ಸಂಬಳ ಪಡೆಯುವವರು’ ಎಂದು ನಿರ್ದೇಶಕರು ತಿಳಿಸಿದರು.</p>.<p>ಈ ಮಧ್ಯೆ, ಐಐಎಂಬಿಯಲ್ಲಿ ಮುಂದಿನ ವರ್ಷ ಬಿಸಿನೆಸ್ ಅನಲಿಟಿಕ್ಸ್ನಲ್ಲಿ ಎಂಬಿಎ ಪ್ರೋಗ್ರಾಂ ಆರಂಭವಾಗಲಿದೆ. 40 ಮಂದಿಗೆ ಪ್ರವೇಶಕ್ಕೆ ಅವಕಾಶ ಇದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಎಟಿ) ಮೂಲಕ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಪ್ರತಿಷ್ಠಿತ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ (ಐಐಎಂಬಿ) ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗದವರಿಗೆ (ಇಡಬ್ಲ್ಯುಎಸ್) ನೀಡುವ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ.</p>.<p>ಐಐಎಂಬಿಗೆ ಈಚೆಗ ಪ್ರವೇಶಾತಿ ಕೊನೆಗೊಂಡಿದ್ದು, ತರಗತಿಗಳೂ ಆರಂಭವಾಗಿವೆ. ಇಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿಯೇ ಪ್ರವೇಶಾತಿ ನಡೆದಿದೆ. ಹೀಗಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುವಂತಾಗಿದೆ.</p>.<p>‘ಮೀಸಲಾತಿಯನ್ನು ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಹಜವಾಗಿ ಹೆಚ್ಚುವುದರಿಂದ ಮೂಲಸೌಲಭ್ಯ ಹೆಚ್ಚಿಸಬೇಕು, ಬೋಧಕರ ಸಂಖ್ಯೆಯನ್ನೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಅಗತ್ಯವಿದೆ’ ಎಂದು ಐಐಎಂಬಿನಿರ್ದೇಶಕ ಪ್ರೊ.ಜಿ.ರಘುರಾಂ ಹೇಳಿದರು.</p>.<p>‘ಈ ವರ್ಷ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ 10 ಮಂದಿಗೆ ಪ್ರವೇಶ ನೀಡಲಾಗಿದೆ. ಆದರೆ ಎಕ್ಸಿಕ್ಯೂಟಿವ್ ಎಂಬಿಎ ಪ್ರೋಗ್ರಾಂನಲ್ಲಿ ಈ ಕೋಟಾವನ್ನು ಹೇಗೆ ಜಾರಿಗೆ ತರಬಹುದು ಎಂಬುದರ ಬಗ್ಗೆ ಇನ್ನಷ್ಟು ಚಿಂತನೆ ನಡೆಸುವ ಅಗತ್ಯ ಇದೆ. ಏಕೆಂದರೆ ಹೀಗೆ ಬರುವ ಅಭ್ಯರ್ಥಿಗಳು ಈಗಾಗಲೇ ಕೆಲಸದ ಅನುಭವ ಹೊಂದಿರುವವರು ಮತ್ತು ಅಧಿಕ ಸಂಬಳ ಪಡೆಯುವವರು’ ಎಂದು ನಿರ್ದೇಶಕರು ತಿಳಿಸಿದರು.</p>.<p>ಈ ಮಧ್ಯೆ, ಐಐಎಂಬಿಯಲ್ಲಿ ಮುಂದಿನ ವರ್ಷ ಬಿಸಿನೆಸ್ ಅನಲಿಟಿಕ್ಸ್ನಲ್ಲಿ ಎಂಬಿಎ ಪ್ರೋಗ್ರಾಂ ಆರಂಭವಾಗಲಿದೆ. 40 ಮಂದಿಗೆ ಪ್ರವೇಶಕ್ಕೆ ಅವಕಾಶ ಇದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಎಟಿ) ಮೂಲಕ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>