‘ವಾಸ್ತುಶಾಸ್ತ್ರವು ತತ್ವಶಾಸ್ತ್ರವೂ ಅಲ್ಲ, ವಿಜ್ಞಾನವೂ ಅಲ್ಲ. ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಇದನ್ನು ದುರುದ್ದೇಶದಿಂದ ಪ್ರಚಾರ ಮಾಡುತ್ತಿವೆ. ಮುಗ್ಧ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಪ್ರವೇಶದ್ವಾರ, ಕಿಟಕಿಗಳು ಸೇರಿ ಕೆಲವೊಮ್ಮೆ ಇಡೀ ಮನೆಯನ್ನು ಬದಲಾಯಿಸಲು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ವಾಸ್ತುಶಾಸ್ತ್ರವು ಅವೈಜ್ಞಾನಿಕ ಕಲ್ಪನೆಯಾಗಿದ್ದು, ಮನೆಯಲ್ಲಿನ ಪೀಠೋಪಕರಣಗಳ ಬದಲಾವಣೆಯಿಂದ ಅದೃಷ್ಟ ಬದಲಾಗುವುದಿಲ್ಲ’ ಎಂದು ಹೇಳಿದ್ದಾರೆ.