ಹಬ್ಬಗಳ ಸಲುವಾಗಿ ನಗರದ ಮಾರುಕಟ್ಟೆಗಳಿಗೆ ಬಾಳೆ ಕಂದು, ಹೂವು ಹಾಗೂ ಕುಂಬಳಕಾಯಿಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ತಂದಿದ್ದರು. ಕೋವಿಡ್ನಿಂದಾಗಿ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಹಾಗಾಗಿ, ಅನೇಕ ವ್ಯಾಪಾರಿಗಳು ಬಾಳೆ ಕಂದು, ಕುಂಬಳಕಾಯಿ ಹಾಗೂ ಹೂವುಗಳನ್ನೆಲ್ಲ ಮಾರುಕಟ್ಟೆಯ ಬಳಿಯೇ ರಾಶಿ ಹಾಕಿ ತೆರಳಿದ್ದರು. ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಸಗಟು ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಯಶವಂತಪುರ, ಯಲಹಂಕದ ರೈತರ ಸಂತೆ ಬಳಿ ಕಸದ ರಾಶಿಯೇ ಕಂಡು ಬಂತು.