<p><strong>ಬೆಂಗಳೂರು:</strong> ಮಂಗಳವಾರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆ ಇರುವುದರಿಂದ ಸೋಮವಾರವನ್ನು ಅದಕ್ಕೆ ಜೋಡಿಸಿಕೊಂಡು ಸಾಲು ರಜೆ ಹಾಕಿ ಪ್ರವಾಸ, ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳ ದರ ದುಬಾರಿ ಆಗಿದೆ.</p>.<p>ಶನಿವಾರ, ಭಾನುವಾರ ವಾರದ ರಜೆಗಳಾದರೆ ಮಂಗಳವಾರ ಸ್ವಾತಂತ್ರ್ಯೋತ್ಸವದ ರಜೆ. ಸೋಮವಾರ ಒಂದು ರಜೆ ಹಾಕಿದರೆ ನಾಲ್ಕು ರಜೆಗಳನ್ನು ಒಮ್ಮೆಲೆ ಪಡೆಯಬಹುದು ಎಂದು ಅನೇಕರು ರಜೆ ಹಾಕಿದ್ದಾರೆ. ಆದರೆ, ಶುಕ್ರವಾರವೇ ಬಸ್ಗಳ ದರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.</p>.<p>ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್ಗಳಲ್ಲಿ ₹ 700ರಿಂದ ₹ 1,000ವರೆಗೆ ಇದ್ದ ದರ ಈಗ ₹ 1850ರಿಂದ ₹ 3,500ರವರೆಗೆ ಏರಿಕೆಯಾಗಿದೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹ 1400–₹ 2000ಕ್ಕೇರಿದೆ.</p>.<p>ಶಿರಸಿಗೆ ₹ 700–₹ 900 ಇದ್ದಿದ್ದು ₹ 1850–₹ 2,150ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಹೊರೆಯಾಗಿದೆ.</p>.<p><strong>ಕೆಎಸ್ಆರ್ಟಿಸಿ ಭರ್ತಿ:</strong> ಖಾಸಗಿ ಬಸ್ಗಳಲ್ಲಿ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್ಟಿಸಿಯ ಬಸ್ಗಳಲ್ಲಿ ಸೀಟ್ಗಳು ಭರ್ತಿಯಾಗಿವೆ. ವಿಶೇಷ ಬಸ್ಗಳಲ್ಲಿಯೂ ಸೀಟ್ ಇಲ್ಲದಂತಾಗಿದೆ. ಶನಿವಾರವೂ ಬಹುತೇಕ ಬಸ್ಗಳಲ್ಲಿ ಸೀಟ್ ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಂಗಳವಾರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆ ಇರುವುದರಿಂದ ಸೋಮವಾರವನ್ನು ಅದಕ್ಕೆ ಜೋಡಿಸಿಕೊಂಡು ಸಾಲು ರಜೆ ಹಾಕಿ ಪ್ರವಾಸ, ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳ ದರ ದುಬಾರಿ ಆಗಿದೆ.</p>.<p>ಶನಿವಾರ, ಭಾನುವಾರ ವಾರದ ರಜೆಗಳಾದರೆ ಮಂಗಳವಾರ ಸ್ವಾತಂತ್ರ್ಯೋತ್ಸವದ ರಜೆ. ಸೋಮವಾರ ಒಂದು ರಜೆ ಹಾಕಿದರೆ ನಾಲ್ಕು ರಜೆಗಳನ್ನು ಒಮ್ಮೆಲೆ ಪಡೆಯಬಹುದು ಎಂದು ಅನೇಕರು ರಜೆ ಹಾಕಿದ್ದಾರೆ. ಆದರೆ, ಶುಕ್ರವಾರವೇ ಬಸ್ಗಳ ದರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.</p>.<p>ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್ಗಳಲ್ಲಿ ₹ 700ರಿಂದ ₹ 1,000ವರೆಗೆ ಇದ್ದ ದರ ಈಗ ₹ 1850ರಿಂದ ₹ 3,500ರವರೆಗೆ ಏರಿಕೆಯಾಗಿದೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹ 1400–₹ 2000ಕ್ಕೇರಿದೆ.</p>.<p>ಶಿರಸಿಗೆ ₹ 700–₹ 900 ಇದ್ದಿದ್ದು ₹ 1850–₹ 2,150ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಹೊರೆಯಾಗಿದೆ.</p>.<p><strong>ಕೆಎಸ್ಆರ್ಟಿಸಿ ಭರ್ತಿ:</strong> ಖಾಸಗಿ ಬಸ್ಗಳಲ್ಲಿ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್ಟಿಸಿಯ ಬಸ್ಗಳಲ್ಲಿ ಸೀಟ್ಗಳು ಭರ್ತಿಯಾಗಿವೆ. ವಿಶೇಷ ಬಸ್ಗಳಲ್ಲಿಯೂ ಸೀಟ್ ಇಲ್ಲದಂತಾಗಿದೆ. ಶನಿವಾರವೂ ಬಹುತೇಕ ಬಸ್ಗಳಲ್ಲಿ ಸೀಟ್ ಭರ್ತಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>