‘ಕಳೆದ ಬಾರಿ 500 ಅರ್ಜಿಗಳು ಬರಬಹುದೆಂದು ನಿರೀಕ್ಷಿಸಿದ್ದೆವು. ಆದರೆ, 900ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಉತ್ತರ ಭಾರತಕ್ಕಿಂತ, ದಕ್ಷಿಣ ಭಾರತದಿಂದ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಬಾರಿ ಎರಡು ತಿಂಗಳು ಮುನ್ನವೇ ಪ್ರಕ್ರಿಯೆ ಆರಂಭಿಸುವುದರಿಂದ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆ ಇದೆ. ಉತ್ತಮ ಅನ್ವೇಷಣೆಗಳಿದ್ದರೆ, ತೀರ್ಪುಗಾರರು ಸಲಹೆ ನೀಡಿದರೆ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲಾಗುವುದು’ ಎಂದು ಸುಧಾಮೂರ್ತಿ ಹೇಳಿದರು.