ಸಂಧಾನಕ್ಕೂ ಒಪ್ಪದ ಅರುಣ್: ಸ್ಥಳಕ್ಕೆ ಬಂದಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಅರುಣ್ ಅವರ ಮನವೋಲಿಸಲು ಪ್ರಯತ್ನಿಸಿದರು. ‘ರಸ್ತೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ. ದಯವಿಟ್ಟು ಎದ್ದೇಳಿ’ ಎಂದು ಕೋರಿದರು. ಅದಕ್ಕೆ ಒಪ್ಪದ ಅರುಣ್, ‘ನನಗೂ ಗೊತ್ತಿದೆ. ಮಗಳನ್ನು ನೋಡಿಯೇ ನಾನು ವಾಪಸು ಹೋಗುವುದು. ಅದಕ್ಕೆ ಅವಕಾಶ ಮಾಡಿಕೊಡಿ’ ಎಂದು ಹೇಳಿದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಇಲಾಕಿಯಾ ಸಹ ಸ್ಪಂದಿಸಲಿಲ್ಲ.