‘ಇದೇ 5ರಂದು ಎಂ.ಇ.ಐ. ರಸ್ತೆಯಲ್ಲಿರುವ ಟ್ರೈಡೆನ್ಟ್ ಆಟೊ ಮೊಬೈಲ್ಸ್ ಮಳಿಗೆಗೆ ಆರೋಪಿಗಳು ಹೋಗಿದ್ದರು. ಕ್ಯಾಷಿಯರ್ ಎಂ. ಕಿರಣ್ ಮಳಿಗೆಯಲ್ಲಿದ್ದರು. ಹಣ ಎಣಿಕೆ ಮಾಡುತ್ತಿದ್ದರು. ಅವರನ್ನು ಮಾತನಾಡಿಸಿದ್ದ ಆರೋಪಿಗಳು, ₹ 2ಸಾವಿರ ನೋಟು ಕೊಟ್ಟು ಚಿಲ್ಲರೆ ನೀಡುವಂತೆ ಕೇಳಿದ್ದರು. ಗ್ರಾಹಕರಿರಬಹುದೆಂದು ತಿಳಿದ ಕಿರಣ್, ನೋಟು ಪಡೆದುಕೊಂಡು ಡ್ರಾಯರ್ ಪರಿಶೀಲಿಸಿದ್ದರು. ಚಿಲ್ಲರೆ ಇಲ್ಲವೆಂದು ಹೇಳಿ ನೋಟು ವಾಪಸು ಕೊಟ್ಟಿದ್ದರು.’