<p><strong>ಬೆಂಗಳೂರು:</strong> ಚಿಲ್ಲರೆ ಕೇಳುವ ಹಾಗೂ ಬಿಡಿಭಾಗ ಖರೀದಿಸುವ ನೆಪದಲ್ಲಿಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಕದ್ದಿದ್ದ ಇರಾನ್ನ ಇಬ್ಬರು ಪ್ರಜೆಗಳನ್ನು ಉತ್ತರ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.</p>.<p>‘ಸಾಯಿದ್ ರೋಸ್ತಮಿ (26) ಹಾಗೂ ಸಬೀರ್ ಹುಸೈನ್ (35) ಬಂಧಿತರು. ಪ್ರವಾಸ ವೀಸಾದಡಿ ದೇಶಕ್ಕೆ ಬಂದಿದ್ದ ಅವರಿಬ್ಬರೂ ದೆಹಲಿಯಲ್ಲಿ ವಾಸವಿದ್ದರು. ಅಲ್ಲಿಂದಲೇ ರಾಜ್ಯಕ್ಕೆ ಬಂದು ಕೃತ್ಯ ಎಸಗಿ ಮರಳುತ್ತಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.</p>.<p>‘ಮಂಗಳೂರು ಹಾಗೂ ಬಂಟ್ವಾಳದ ಮಾಂಡೋವಿ ಮೋಟಾರ್ಸ್, ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂವ್ಯಾಲ್ಯೂ, ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯ ಟ್ರೈಡೆಂಟ್ಆಟೊ ಮೊಬೈಲ್ ಸರ್ವೀಸ್ ಮಳಿಗೆ ಹಾಗೂ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಕಲ್ಯಾಣಿ ಮೋಟಾರ್ಸ್ ಮಳಿಗೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದರು.</p>.<p>’ಇದುವರೆಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಹಣವನ್ನು ಏತಕ್ಕೆ ಖರ್ಚು ಮಾಡಿದ್ದಾರೆಂಬುದು ಗೊತ್ತಾಗಿಲ್ಲ. ಹಣದ ಜಪ್ತಿ ಪ್ರಕ್ರಿಯೆ ನಡೆದಿದೆ’ ಎಂದು ಹೇಳಿದರು.</p>.<p class="Subhead">ನೋಟೇ ಅಸ್ತ್ರ: ‘₹2 ಸಾವಿರ ಮುಖಬೆಲೆಯ ನೋಟು ಹಿಡಿದು ಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗುತ್ತಿದ್ದ ಆರೋಪಿಗಳು, ಅದೇ ನೋಟು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಇದೇ 5ರಂದು ಎಂ.ಇ.ಐ. ರಸ್ತೆಯಲ್ಲಿರುವ ಟ್ರೈಡೆನ್ಟ್ ಆಟೊ ಮೊಬೈಲ್ಸ್ ಮಳಿಗೆಗೆ ಆರೋಪಿಗಳು ಹೋಗಿದ್ದರು. ಕ್ಯಾಷಿಯರ್ ಎಂ. ಕಿರಣ್ ಮಳಿಗೆಯಲ್ಲಿದ್ದರು. ಹಣ ಎಣಿಕೆ ಮಾಡುತ್ತಿದ್ದರು. ಅವರನ್ನು ಮಾತನಾಡಿಸಿದ್ದ ಆರೋಪಿಗಳು, ₹ 2ಸಾವಿರ ನೋಟು ಕೊಟ್ಟು ಚಿಲ್ಲರೆ ನೀಡುವಂತೆ ಕೇಳಿದ್ದರು. ಗ್ರಾಹಕರಿರಬಹುದೆಂದು ತಿಳಿದ ಕಿರಣ್, ನೋಟು ಪಡೆದುಕೊಂಡು ಡ್ರಾಯರ್ ಪರಿಶೀಲಿಸಿದ್ದರು. ಚಿಲ್ಲರೆ ಇಲ್ಲವೆಂದು ಹೇಳಿ ನೋಟು ವಾಪಸು ಕೊಟ್ಟಿದ್ದರು.’</p>.<p>‘ನೋಟು ಪಡೆದುಕೊಳ್ಳುವಾಗಲೇ ಅದನ್ನು ಆರೋಪಿ ಕೆಳಗೆ ಬೀಳಿಸಿದ್ದ. ಮತ್ತೊಬ್ಬ ಕಿರಣ್ ಗಮನವನ್ನು ಬೇರೆಡೆ ಸೆಳೆದು ₹44 ಸಾವಿರ ಕದ್ದಿದ್ದ. ನಂತರ, ತಮ್ಮದೇ ಭಾಷೆಯಲ್ಲಿ ಮಾತನಾಡುತ್ತ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಆ ಬಗ್ಗೆ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚಿಲ್ಲರೆ ಕೇಳುವ ಹಾಗೂ ಬಿಡಿಭಾಗ ಖರೀದಿಸುವ ನೆಪದಲ್ಲಿಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ಕದ್ದಿದ್ದ ಇರಾನ್ನ ಇಬ್ಬರು ಪ್ರಜೆಗಳನ್ನು ಉತ್ತರ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.</p>.<p>‘ಸಾಯಿದ್ ರೋಸ್ತಮಿ (26) ಹಾಗೂ ಸಬೀರ್ ಹುಸೈನ್ (35) ಬಂಧಿತರು. ಪ್ರವಾಸ ವೀಸಾದಡಿ ದೇಶಕ್ಕೆ ಬಂದಿದ್ದ ಅವರಿಬ್ಬರೂ ದೆಹಲಿಯಲ್ಲಿ ವಾಸವಿದ್ದರು. ಅಲ್ಲಿಂದಲೇ ರಾಜ್ಯಕ್ಕೆ ಬಂದು ಕೃತ್ಯ ಎಸಗಿ ಮರಳುತ್ತಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.</p>.<p>‘ಮಂಗಳೂರು ಹಾಗೂ ಬಂಟ್ವಾಳದ ಮಾಂಡೋವಿ ಮೋಟಾರ್ಸ್, ಮೈಸೂರಿನ ಮಾಂಡೋವಿ ಮೋಟಾರ್ಸ್ ಟ್ರೂವ್ಯಾಲ್ಯೂ, ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯ ಟ್ರೈಡೆಂಟ್ಆಟೊ ಮೊಬೈಲ್ ಸರ್ವೀಸ್ ಮಳಿಗೆ ಹಾಗೂ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಕಲ್ಯಾಣಿ ಮೋಟಾರ್ಸ್ ಮಳಿಗೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದರು.</p>.<p>’ಇದುವರೆಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಹಣವನ್ನು ಏತಕ್ಕೆ ಖರ್ಚು ಮಾಡಿದ್ದಾರೆಂಬುದು ಗೊತ್ತಾಗಿಲ್ಲ. ಹಣದ ಜಪ್ತಿ ಪ್ರಕ್ರಿಯೆ ನಡೆದಿದೆ’ ಎಂದು ಹೇಳಿದರು.</p>.<p class="Subhead">ನೋಟೇ ಅಸ್ತ್ರ: ‘₹2 ಸಾವಿರ ಮುಖಬೆಲೆಯ ನೋಟು ಹಿಡಿದು ಕಾರು ಮಾರಾಟ ಮಳಿಗೆ ಹಾಗೂ ದುರಸ್ತಿ ಕೇಂದ್ರಗಳಿಗೆ ಹೋಗುತ್ತಿದ್ದ ಆರೋಪಿಗಳು, ಅದೇ ನೋಟು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<p>‘ಇದೇ 5ರಂದು ಎಂ.ಇ.ಐ. ರಸ್ತೆಯಲ್ಲಿರುವ ಟ್ರೈಡೆನ್ಟ್ ಆಟೊ ಮೊಬೈಲ್ಸ್ ಮಳಿಗೆಗೆ ಆರೋಪಿಗಳು ಹೋಗಿದ್ದರು. ಕ್ಯಾಷಿಯರ್ ಎಂ. ಕಿರಣ್ ಮಳಿಗೆಯಲ್ಲಿದ್ದರು. ಹಣ ಎಣಿಕೆ ಮಾಡುತ್ತಿದ್ದರು. ಅವರನ್ನು ಮಾತನಾಡಿಸಿದ್ದ ಆರೋಪಿಗಳು, ₹ 2ಸಾವಿರ ನೋಟು ಕೊಟ್ಟು ಚಿಲ್ಲರೆ ನೀಡುವಂತೆ ಕೇಳಿದ್ದರು. ಗ್ರಾಹಕರಿರಬಹುದೆಂದು ತಿಳಿದ ಕಿರಣ್, ನೋಟು ಪಡೆದುಕೊಂಡು ಡ್ರಾಯರ್ ಪರಿಶೀಲಿಸಿದ್ದರು. ಚಿಲ್ಲರೆ ಇಲ್ಲವೆಂದು ಹೇಳಿ ನೋಟು ವಾಪಸು ಕೊಟ್ಟಿದ್ದರು.’</p>.<p>‘ನೋಟು ಪಡೆದುಕೊಳ್ಳುವಾಗಲೇ ಅದನ್ನು ಆರೋಪಿ ಕೆಳಗೆ ಬೀಳಿಸಿದ್ದ. ಮತ್ತೊಬ್ಬ ಕಿರಣ್ ಗಮನವನ್ನು ಬೇರೆಡೆ ಸೆಳೆದು ₹44 ಸಾವಿರ ಕದ್ದಿದ್ದ. ನಂತರ, ತಮ್ಮದೇ ಭಾಷೆಯಲ್ಲಿ ಮಾತನಾಡುತ್ತ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಆ ಬಗ್ಗೆ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>