'ಆರ್ಎಸ್ಎಸ್ ಬಗ್ಗೆಯಾಗಲಿ, ಹೆಡಗೇವಾರ್ ಬಗ್ಗೆಯಾಗಲಿ ಬಹಳ ಕೃತಿಗಳು ಬಂದಿರಲಿಲ್ಲ. ಬಂದಿದ್ದರೂ ಅವು ಪ್ರಾದೇಶಿಕ ಭಾಷೆಗಳಿಗೆ ಸೀಮಿತವಾಗಿದ್ದು, ಇಂಗ್ಲಿಷ್ನಲ್ಲಿ ಇರಲಿಲ್ಲ. ಅದಕ್ಕೆ ರಾಜಕೀಯ ಕಾರಣವೂ ಇರಬಹುದು. ಕಳೆದ 10 ವರ್ಷಗಳಿಂದ ಈ ಕೊರತೆ ನೀಗುತ್ತಿದೆ. ಮುಕ್ತವಾಗಿ ಪುಸ್ತಕಗಳು ಪ್ರಕಟವಾಗುತ್ತಿವೆ. ಭಾರತದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ಭಾಷೆಯ ಓದುಗರಿಗೆ ಕೃತಿಗಳು ತಲುಪಬೇಕು' ಎಂದರು.