ಕಲಾಪದ ವೇಳೆಯಲ್ಲಿ ಗುಂಪು ಗುಂಪಾಗಿ ಸೇರಿ ಚರ್ಚೆಗೆ ನಡೆಸುತ್ತಿದ್ದ ಬಿಜೆಪಿ ಸದಸ್ಯರ ವರ್ತನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಮಸೂದೆಗಳ ಮಂಡನೆ ವೇಳೆಯಲ್ಲಿ ಕುಮಾರ್ ಬಂಗಾರಪ್ಪ, ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಮಾತನಾಡುತ್ತಿದ್ದರು. ಸದಸ್ಯರ ಹೆಸರು ಕರೆದ ಕಾಗೇರಿ, ‘ಮಸೂದೆ ಮಂಡನೆಯ ವೇಳೆಯಲ್ಲೂ ನೀವು ನೀವೇ ಮಾತನಾಡಿದರೆ ಹೇಗೆ. ಇದು ಸರಿಯಾದ ವರ್ತನೆಯಲ್ಲ‘ ಎಂದರು.