<p><strong>ಬೆಂಗಳೂರು:</strong> ಕೇಂದ್ರ ಇದೀಗ ನೀಡಿರುವ ₹1200 ಕೋಟಿ ಅನುದಾನವು ಕುಮಾರಸ್ವಾಮಿ ಅವಧಿಯಲ್ಲಿ ಪ್ರಸ್ತಾಪಿಸಿದ ಪರಿಹಾರ ಮೊತ್ತ ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.</p>.<p>ಯಡಿಯೂರಪ್ಪ ಹೇಳಿದಂತೆ ಅಪ್ಪ, ಮಗ ಸೇರಿ ಸಿದ್ಧರಾಮಯ್ಯ ಅವರನ್ನು ಮುಗಿಸುವುದು ಸಾಧ್ಯವಿದೆಯೇ?<br />ಮೂಲೆಗೆ ಕೂಡಿಸುವುದು ಜನತೆ. ಉಳಿದ ಯಾರಿಗೂ ಆ ಶಕ್ತಿ ಇಲ್ಲ ಎಂದು ಅವರು ಗುರುವಾರ ಇಲ್ಲಿ ನೆರೆ ಪರಿವಾರದಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು.</p>.<p>ದೇವೇಗೌಡರ ಬಳಿಕವೂ ಪಕ್ಷ ಉಳಿಯಬೇಕು. ಈ ಪಕ್ಷ ರಾಜ್ಯದ ಒಳಿತಿಗಾಗಿ ಮುಂದೆಯೂ ಇರಬೇಕಾಗಿದೆ ಎಂದರು.</p>.<p><strong>ಜೆಡಿಎಸ್ ಸಭೆ ಆರಂಭ:</strong>ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ವತಿಯಿಂದನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ಸಭೆ ಆರಂಭವಾಯಿತು.</p>.<p>87 ವರ್ಷದ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಈ ಸಭೆ ಆರಂಭವಾಗಿದೆ.</p>.<p>ಪಕ್ಷದ ಕಚೇರಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ದೇವೇಗೌಡರು ಆನಂದ ರಾವ್ ವೃತ್ತದ ಗಾಂಧಿ ಪ್ರತಿಮೆ ತನಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದರು. ಅಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಿದ ಬಳಿಕ ದೇವೇಗೌಡರು ಪಾದಯಾತ್ರೆ ಮೂಲಕ ಫ್ರೀಡಂ ಪಾರ್ಕ್ ನತ್ತ ಬಂದರು.</p>.<p>ಆರಂಭದಲ್ಲಿ ಮನನ ಮಾತನಾಡಿದ ಪಕ್ಷದ ವಕ್ತಾರ ವೈ. ಎಸ್. ದತ್ತ ಮಾತನಾಡಿ, ಮಾಧ್ಯಮಗಳ ನಿರ್ಬಂಧದ ವಿರುದ್ಧ ಉಗ್ರ ಹೋರಾಟ ನಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಇದೀಗ ನೀಡಿರುವ ₹1200 ಕೋಟಿ ಅನುದಾನವು ಕುಮಾರಸ್ವಾಮಿ ಅವಧಿಯಲ್ಲಿ ಪ್ರಸ್ತಾಪಿಸಿದ ಪರಿಹಾರ ಮೊತ್ತ ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.</p>.<p>ಯಡಿಯೂರಪ್ಪ ಹೇಳಿದಂತೆ ಅಪ್ಪ, ಮಗ ಸೇರಿ ಸಿದ್ಧರಾಮಯ್ಯ ಅವರನ್ನು ಮುಗಿಸುವುದು ಸಾಧ್ಯವಿದೆಯೇ?<br />ಮೂಲೆಗೆ ಕೂಡಿಸುವುದು ಜನತೆ. ಉಳಿದ ಯಾರಿಗೂ ಆ ಶಕ್ತಿ ಇಲ್ಲ ಎಂದು ಅವರು ಗುರುವಾರ ಇಲ್ಲಿ ನೆರೆ ಪರಿವಾರದಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು.</p>.<p>ದೇವೇಗೌಡರ ಬಳಿಕವೂ ಪಕ್ಷ ಉಳಿಯಬೇಕು. ಈ ಪಕ್ಷ ರಾಜ್ಯದ ಒಳಿತಿಗಾಗಿ ಮುಂದೆಯೂ ಇರಬೇಕಾಗಿದೆ ಎಂದರು.</p>.<p><strong>ಜೆಡಿಎಸ್ ಸಭೆ ಆರಂಭ:</strong>ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ವತಿಯಿಂದನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ಸಭೆ ಆರಂಭವಾಯಿತು.</p>.<p>87 ವರ್ಷದ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಈ ಸಭೆ ಆರಂಭವಾಗಿದೆ.</p>.<p>ಪಕ್ಷದ ಕಚೇರಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ದೇವೇಗೌಡರು ಆನಂದ ರಾವ್ ವೃತ್ತದ ಗಾಂಧಿ ಪ್ರತಿಮೆ ತನಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದರು. ಅಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಿದ ಬಳಿಕ ದೇವೇಗೌಡರು ಪಾದಯಾತ್ರೆ ಮೂಲಕ ಫ್ರೀಡಂ ಪಾರ್ಕ್ ನತ್ತ ಬಂದರು.</p>.<p>ಆರಂಭದಲ್ಲಿ ಮನನ ಮಾತನಾಡಿದ ಪಕ್ಷದ ವಕ್ತಾರ ವೈ. ಎಸ್. ದತ್ತ ಮಾತನಾಡಿ, ಮಾಧ್ಯಮಗಳ ನಿರ್ಬಂಧದ ವಿರುದ್ಧ ಉಗ್ರ ಹೋರಾಟ ನಡೆಯಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>