‘ಉದ್ಯಾನದ ಮೇಲೆಯೇ ಹೈಟೆನ್ಷನ್ ವೈಯರ್ ಹಾದು ಹೋಗಿದೆ. ಹೊಂಗೆ ಮರ ಸೇರಿದಂತೆ ಹಲವು ಮರಗಳು ಎತ್ತರ ಬೆಳೆದು, ವಿದ್ಯುತ್ ತಂತಿಯನ್ನು ಸ್ಪರ್ಶಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ, ಬೆಸ್ಕಾಂನವರು ಮರಗಳ ರೆಂಬೆ–ಕೊಂಬೆಗಳನ್ನು ಆಗಾಗ ಕತ್ತರಿಸುತ್ತಾರೆ. ಆದರೆ, ಅವುಗಳನ್ನು ಹಾಗೆಯೇ ಬಿಟ್ಟು ಹೋಗಿದ್ದರಿಂದ ಉದ್ಯಾನದಲ್ಲಿ ಕಸ ಬಿದ್ದಂತೆ ಕಾಣುತ್ತದೆ. ಆದರೆ, ನಾವು ನಿಯಮಿತವಾಗಿ ಸ್ವಚ್ಛತಾ ಕೆಲಸ ಸೇರಿದಂತೆ ಎಲ್ಲ ನಿರ್ವಹಣಾ ಕಾರ್ಯ ಮಾಡುತ್ತಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.