‘ಕವಿತೆ, ಸಣ್ಣಕತೆ, ವಿಮರ್ಶೆಯಲ್ಲಿ ಸಾಧನೆ ಮಾಡಿದ ಅವರಿಗೆ ಬದುಕಿನುದ್ದಕ್ಕೂ ವಿವಾದಗಳೇ ಸುತ್ತುವರೆದಿದ್ದವು. ಅವರು ಪಡೆದ ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ, ಕೇರಳ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಸ್ಥಾನ ಸೇರಿದಂತೆ ವಿವಿಧ ಗೌರವಗಳೂಚರ್ಚೆಗೆ ಗ್ರಾಸವಾಗಿದ್ದವು. ಸದಾ ಸುದ್ದಿಯಲ್ಲಿರುತ್ತಿದ್ದ ಅವರು, ಕನ್ನಡದ ಅಸ್ಮಿತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು’ ಎಂದು ಹೇಳಿದರು.