ಶಾಸಕನ ದೂರಿನಲ್ಲಿ ಏನಿದೆ? ‘ಕಲಬುರ್ಗಿ ನಿವಾಸಿಯಾದ ಮಹಿಳೆ ಹಾಗೂ ಅವರ ಪತಿ, 2009ರಲ್ಲಿ ಪರಿಚಯವಾಗಿದ್ದರು. ತಮ್ಮ ಜಮೀನು ವ್ಯಾಜ್ಯವನ್ನು ನನ್ನ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು. ಅವರ ಮಗನ ಶಾಲಾ ದಾಖಲಾತಿಗೂ ಸಹಾಯ ಮಾಡಿದ್ದೆ. ಅದನ್ನೇ ದುರುಪಯೋಗಪಡಿಸಿಕೊಂಡ ಮಹಿಳೆ, 2018ರಲ್ಲಿ ನನ್ನ ವಿರುದ್ಧವೇ ಹಣದ ಆರೋಪ ಮಾಡಿದ್ದಳು. ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಹಲವೆಡೆ ದೂರುಗಳನ್ನು ಕೊಟ್ಟು ಮರ್ಯಾದೆಗೆ ಧಕ್ಕೆ ತಂದಿದ್ದರು. ಜೊತೆಗೆ, ಜೀವ ಬೆದರಿಕೆಯೊಡ್ಡಿದ್ದರು’ ಎಂದು ರಾಜಕುಮಾರ್ ಪಾಟೀಲ ತೇಲ್ಕೂರ ದೂರಿನಲ್ಲಿ ತಿಳಿಸಿದ್ದಾರೆ.