ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಒಳಿತಿನ ಸಂಘಗಳು ವಿರಳ’

Last Updated 21 ಡಿಸೆಂಬರ್ 2020, 3:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾಜದ ಹೆಸರಿನಲ್ಲಿ ಸ್ವಂತ ಉಪಯೋಗದ ಸಂಘಟನೆಗಳುಹೆಚ್ಚಾಗಿ ನಿರ್ಮಾಣವಾಗಿದ್ದು, ತಮ್ಮ ಏಳಿಗೆಗೆ ಮಾತ್ರ ಸೀಮಿತವಾಗಿದೆ. ಆದರೆ, ಸಮಾಜದ ಒಳಿತಿಗೆ ಶ್ರಮಿಸುವ ಸಂಘಗಳು ಅತಿ ವಿರಳ’ ಎಂದು ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ತಿಳಿಸಿದರು.

ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘವು ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಹತ್ತು ಮಂದಿ ಸೇರಿ ಒಂದು ಸಂಘವು ಆಯವ್ಯಯ ಇಲ್ಲದೆ ಕಟ್ಟಿರುವ ಸಂಘ ಇದು.ಸಮಾಜಕ್ಕೆೆ ಒಳಿತು ಮಾಡುವ ಸಂಘಗಳು ಇರಬೇಕು. ಯಾವುದೇ ಸಮಾಜಕ್ಕೆ ನಾವು ಅನಿವಾರ್ಯವಾಗಬಾರದು, ಅವಶ್ಯಕವಾಗಿರಬೇಕು’ ಎಂದರು.

ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ,‘ ಕಾಳಿದಾಸರ ಹೆಸರಿನಲ್ಲಿ ಕಟ್ಟಲಾಗಿರುವ ಈ ಸಂಘ, ಸಾಹಿತ್ಯ ವಿಷಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಇಂತಹ ಸಂಘಗಳು ಪ್ರೇರಣೆ ನೀಡಿದ್ದರಿಂದ ಉನ್ನತ ಸ್ಥಾನ ಪಡೆಯಲು ಅನುಕೂಲವಾಯಿತು’ ಎಂದು ಹೇಳಿದರು.

ಆಯುರ್ವೇದ ಮಹಾವಿದ್ಯಾಲಯ ಸ್ಥಾಪನೆ: ’ಸಾಹಿತ್ಯ ಹಾಗೂ ಶೈಕ್ಷಣಿಕವಾಗಿ ಕೆಲ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರದಿಂದ 4 ಎಕರೆ 30 ಗುಂಟೆ ಜಾಗವನ್ನು ಸಂಘ ಪಡೆದಿದ್ದು, ಇಲ್ಲಿ ಆಯುರ್ವೇದ ಮಹಾವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದುಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘದ ಅಧ್ಯಕ್ಷ ಬಿ.ದೇವರಾಜ ತಿಳಿಸಿದರು.

‘ಇದರ ಆವರಣದಲ್ಲಿ ಶಾಲಾ-ಕಾಲೇಜು, ಉದ್ಯಾನ, ಸಮುದಾಯ ಭವನ, ಗ್ರಂಥಾಲಯ ಹಾಗೂ ಆಸ್ಪತ್ರೆೆ ತೆರೆಯಲಾಗುತ್ತದೆ. ಆರೋಗ್ಯ ಮತ್ತು ಶೈಕ್ಷಣಿಕ ಅನುಕೂಲಕ್ಕಾಗಿ ಕೆಲವೊಂದು ಕಟ್ಟಡಗಳು ನಿರ್ಮಿಸಲಾಗುತ್ತಿದೆ. ಜ.15ರ ಬಳಿಕ ಇದಕ್ಕೆೆ ಅಧಿಕೃತವಾಗಿ ಚಾಲನೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT