ಪರಿಷತ್ತಿನ ಸರ್ವ ಸದಸ್ಯರ ವಿಶೇಷ ಸಭೆ ಮತ್ತು ಮಹಾಸಭೆಯನ್ನು ಮೇ 1ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕರೆಯಲಾಗಿದೆ. ಆದರೆ, ಮಹಾಸಭೆ ಕರೆದಾಗ ವಿಶೇಷ ಸಭೆಯ ಅಗತ್ಯ ಏನು ಎಂದು ಪ್ರಶ್ನಿಸಿ ಪರಿಷತ್ತಿನ ಸದಸ್ಯರಾದ ಎಸ್.ಸಿ. ಜಯಶಂಕರಸ್ವಾಮಿ,ನ್. ಹನುಮೇಗೌಡ, ಎಲ್. ವಿಜಯಕುಮಾರ್, ವಿ. ಹರೀಶ್, ಕೆ. ರಾಜೇಶ್, ನಂಜುಂಡಸ್ವಾಮಿ ಅವರು ದೂರು ಸಲ್ಲಿಸಿದ್ದಾರೆ.