<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 12 ಮಂದಿಯಲ್ಲಿ ಒಬ್ಬರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದಾರೆ.</p>.<p>ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ಗಾದಿಗೆ ಏರಲು ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಮೇ 9 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಸ್ಪರ್ಧಿಸಿದವರಲ್ಲಿ ಪಿ. ಸುಕುಮಾರ್ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.</p>.<p>ಅಂತಿಮ ಕಣದಲ್ಲಿ ಎಚ್.ಎ. ಆತ್ಮಾನಂದ, ಕಾಂತರಾಜಪುರ ಸುರೇಶ್, ಕುವೆಂಪು ಪ್ರಕಾಶ್, ಕೆ.ಎಸ್. ಕೃಷ್ಣೋಜಿರಾವ್, ಆರ್. ಜಯಕುಮಾರ ಗೌಡ, ಎಂ. ತಿಮ್ಮಯ್ಯ, ದಯಾನಂದ ತಿಪ್ಪೇರುದ್ರಪ್ಪ, ಎಂ. ಪ್ರಕಾಶ್ ಮೂರ್ತಿ, ಎಂ. ಪುಟ್ಟರಾಜು, ವೇದಮೂರ್ತಿ ಕೆ.ಸಿ. ಹಾಗೂ ಪಿ.ಸಿ. ಹೇಮಂತಕುಮಾರ್ ಇದ್ದಾರೆ.</p>.<p>ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 36,596 ಸದಸ್ಯರಿದ್ದಾರೆ. ಇವರಲ್ಲಿ 36,389 ಮಂದಿ ಮತ ಚಲಾವಣೆಯ ಅರ್ಹತೆ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 12 ಮಂದಿಯಲ್ಲಿ ಒಬ್ಬರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದಾರೆ.</p>.<p>ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ಗಾದಿಗೆ ಏರಲು ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಮೇ 9 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಸ್ಪರ್ಧಿಸಿದವರಲ್ಲಿ ಪಿ. ಸುಕುಮಾರ್ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.</p>.<p>ಅಂತಿಮ ಕಣದಲ್ಲಿ ಎಚ್.ಎ. ಆತ್ಮಾನಂದ, ಕಾಂತರಾಜಪುರ ಸುರೇಶ್, ಕುವೆಂಪು ಪ್ರಕಾಶ್, ಕೆ.ಎಸ್. ಕೃಷ್ಣೋಜಿರಾವ್, ಆರ್. ಜಯಕುಮಾರ ಗೌಡ, ಎಂ. ತಿಮ್ಮಯ್ಯ, ದಯಾನಂದ ತಿಪ್ಪೇರುದ್ರಪ್ಪ, ಎಂ. ಪ್ರಕಾಶ್ ಮೂರ್ತಿ, ಎಂ. ಪುಟ್ಟರಾಜು, ವೇದಮೂರ್ತಿ ಕೆ.ಸಿ. ಹಾಗೂ ಪಿ.ಸಿ. ಹೇಮಂತಕುಮಾರ್ ಇದ್ದಾರೆ.</p>.<p>ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 36,596 ಸದಸ್ಯರಿದ್ದಾರೆ. ಇವರಲ್ಲಿ 36,389 ಮಂದಿ ಮತ ಚಲಾವಣೆಯ ಅರ್ಹತೆ ಹೊಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>