ಬೆಂಗಳೂರು ಉತ್ತರ ಡಿಸಿಪಿ ದೇವರಾಜ್, ಯಶವಂತಪುರ ಎಸಿಪಿ ಅರುಣ್ ಗೌಡ, ರಾಜರಾಜೇಶ್ವರಿನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗೂ ರಾಜಗೋಪಾಲನಗರ ಠಾಣೆಗಳ ಇನ್ಸ್ಪೆಕ್ಟರ್ಗಳಾದ ಶಿವಣ್ಣ, ಸುರೇಶ್ ಕೆ., ಮಂಜುನಾಥ್ ಮತ್ತು ಜಗದೀಶ್ ವರ್ಗಾವಣೆಗೊಳ್ಳಲಿದ್ದಾರೆ. ಸಚಿವರೊಬ್ಬರ ಶಿಫಾರಸಿನ ಮೇರೆಗೆ ಈ ಪೊಲೀಸ್ ಅಧಿಕಾರಿಗಳನ್ನು ಈ ಠಾಣೆಗಳಿಗೆ ನೇಮಕ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ.