‘ಗುಣಸಾಗರಿ ನಾಗರಾಜು ದತ್ತಿನಿಧಿ ಬಹುಮಾನ’ಕ್ಕೆ ವಿಶಾಲ ಆರಾಧ್ಯ ಅವರ ‘ಬೊಂಬಾಯಿ ಮಿಠಾಯಿ’ ಮಕ್ಕಳ ಸಾಹಿತ್ಯ, ‘ಇಂದಿರಾ ವಾಣಿರಾವ್ ದತ್ತಿನಿಧಿ ಬಹುಮಾನ’ಕ್ಕೆ ಕೃಷ್ಣಾಬಾಯಿ ಹಾಗಲವಾಡಿ ಅವರ ‘ದಾನ ಚಿಂತಾಮಣಿ ಅತ್ತಿಮಬ್ಬೆ’ ನಾಟಕ, ‘ನೀಳಾದೇವಿ ದತ್ತಿನಿಧಿ ಬಹುಮಾನ’ಕ್ಕೆ ಮಂದಾಕಿನಿ ಪುರೋಹಿತ ಅವರ ‘ಡಾ. ಸರೋಜಿನಿ ಶಿಂತ್ರಿ’ ಜೀವನ ಚರಿತ್ರೆ, ‘ಡಾ. ಜಯಮ್ಮ ಕರಿಯಣ್ಣ ದತ್ತಿನಿಧಿ ಬಹುಮಾನ’ಕ್ಕೆ ಡಾ. ಇಂದಿರಾ ಹೆಗ್ಗಡೆ ಅವರ ‘ಬಾರ್ಕೂರಿನ ಕುಂಡೋದರ ಮತ್ತು ಅಳಿಯ ಸಂತಾನ ಕಟ್ಟು’ ಸಂಶೋಧನಾ ಕೃತಿ ಹಾಗೂ ‘ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನ’ಕ್ಕೆ ಉದಯೋನ್ಮುಖ ಕವಿಯತ್ರಿಯರಾದ ಅನಿತಾ ಸಿಕ್ವೇರಾ, ಮಾನಸಾ ಕೆ.ಕೆ., ಕುಶಾಲ ಸ್ವಾಮಿ, ರಾಜಶ್ರೀ ಶೆಟ್ಟಿ ಮತ್ತು ಶಶಿರೇಖಾ ಜಿ.ಕೆ. ಭಾಜನರಾಗಿದ್ದಾರೆ.