ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಖಾತರಿ ಉಳಿಸಿ’ ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಇಂದು ಭಾಗಿ

Last Updated 24 ಮಾರ್ಚ್ 2023, 20:33 IST
ಅಕ್ಷರ ಗಾತ್ರ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ 100 ದಿನಗಳ ‘ಉದ್ಯೋಗ ಖಾತರಿ ಉಳಿಸಿ' ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಶುಕ್ರವಾರ ಭಾಗವಹಿಸಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಿರುವುದು, ಕೂಲಿಕಾರರ ಹಾಜರಿಯ ಡಿಜಿಟಲೀಕರಣ ಮತ್ತು ಇತ್ತೀಚೆಗೆ ಜಾರಿಯಲ್ಲಿ ತಂದಿರುವ ಆಧಾರ್ ಆಧರಿತ ಸಂಬಳ ನೀಡಿಕೆ ವ್ಯವಸ್ಥೆಯನ್ನು ವಿರೋಧಿಸಿ ಜಂತರ್‌ ಮಂತರ್‌ನಲ್ಲಿ ಫೆಬ್ರುವರಿ 13ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಕರ್ನಾಟಕದಿಂದ ಹೋರಾಟಗಾರರಾದ ಶಾರದಾ ಗೋಪಾಲ, ದು.ಸರಸ್ವತಿ ನೇತೃತ್ವದಲ್ಲಿ ಕೂಲಿಕಾರರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT