ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಿರುವುದು, ಕೂಲಿಕಾರರ ಹಾಜರಿಯ ಡಿಜಿಟಲೀಕರಣ ಮತ್ತು ಇತ್ತೀಚೆಗೆ ಜಾರಿಯಲ್ಲಿ ತಂದಿರುವ ಆಧಾರ್ ಆಧರಿತ ಸಂಬಳ ನೀಡಿಕೆ ವ್ಯವಸ್ಥೆಯನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಫೆಬ್ರುವರಿ 13ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಕರ್ನಾಟಕದಿಂದ ಹೋರಾಟಗಾರರಾದ ಶಾರದಾ ಗೋಪಾಲ, ದು.ಸರಸ್ವತಿ ನೇತೃತ್ವದಲ್ಲಿ ಕೂಲಿಕಾರರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.