‘ಬಾಲಕ ಉಮರ್ ಅಲಿಗೆ ಗಾಳಿಪಟವೆಂದರೆ ಅಚ್ಚುಮೆಚ್ಚು. ಗಾಳಿಪಟ ಕೊಡಿಸುವ ನೆಪದಲ್ಲಿ ಆರೋಪಿಗಳು ಆತನನ್ನು ಪರಿಚಯ ಮಾಡಿಕೊಂಡಿದ್ದರು.ಶುಕ್ರವಾರ ಸಂಜೆ ದಂಪತಿ, ಶಾಪಿಂಗ್ಗಾಗಿ ಹೊರಗಡೆ ಹೋಗಿದ್ದರು. ಬಾಲಕ ಹಾಗೂ ಆತನ ಸಹೋದರಿ ಮಾತ್ರ ಮನೆಯಲ್ಲಿದ್ದರು. ಮನೆ ಬಳಿ ಬಂದಿದ್ದ ಆರೋಪಿಗಳು, ಗಾಳಿಪಟ ಕೊಡಿಸುವುದಾಗಿ ಹೇಳಿ ಆತನನ್ನು ಹೊರಗೆ ಕರೆಸಿಕೊಂಡು ಅಪಹರಿಸಿದ್ದರು. ರಾತ್ರಿ ಪೋಷಕರು ಮನೆಗೆ ಬಂದಾಗಲೇ ವಿಷಯ ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು. ತಡರಾತ್ರಿ ಕರೆ ಮಾಡಿದ್ದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದೂ ಹೇಳಿದರು.