‘ಜೀವನ್ ಹಾಗೂ ಸ್ನೇಹಿತರು, ಕೊಠಡಿಯೊಂದಕ್ಕೆ ಹೋಗಿ ಮದ್ಯದ ಪಾರ್ಟಿ ಮಾಡಿದ್ದರು. ನಂತರ, ಜೀವನ್ ತಲೆ–ಹಣೆ ಮೇಲೆ ಟೊಮೆಟೊ ಸಾಸ್ ಹಚ್ಚಿದ್ದರು. ಅದನ್ನೇ ರಕ್ತವೆಂಬಂತೆ ಬಿಂಬಿಸಿ ಫೋಟೊ ತೆಗೆದಿದ್ದರು. ಅದೇ ಫೋಟೊವನ್ನು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದ ಆರೋಪಿಗಳು, ‘ಜೀವನ್ನನ್ನು ಅಪಹರಣ ಮಾಡಿದ್ದೇವೆ. ₹1 ಲಕ್ಷ ನೀಡಬೇಕು. ಇಲ್ಲದಿದ್ದರೆ, ಕೊಲೆ ಮಾಡುತ್ತೇವೆ’ ಎಂಬುದಾಗಿ ಬೆದರಿಸಿದ್ದರು.’