<p><strong>ಬೆಂಗಳೂರು: </strong>ಹಾಲು ಉತ್ಪಾದಕರ ಸಂಘ, ಡೇರಿ ಹಾಗೂ ಹೈನುಗಾರಿಕೆಯ ಘಟಕಗಳ ಮೂಲಸೌಲಭ್ಯ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್) ಕೃತಜ್ಞತೆ ಸಲ್ಲಿಸಿದೆ.</p>.<p>‘ಕೋವಿಡ್-19 ರಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಕುಸಿದಿರುವ ಕಾರಣ ಹಾಲಿನ ಪುಡಿ,<br />ಬೆಣ್ಣೆ, ತುಪ್ಪ ಮುಂತಾದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಾಗಿ ಹದಗೆಡುವ ಅಪಾಯವಿದೆ. ಇದರಿಂದಾಗಿ ಈ ವಲಯವು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇತ್ತು. ಇದನ್ನು ಅರಿತು ಕೂಡಲೇ ನೆರವು ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ವಂದನೆಗಳು’ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಬ್ಯಾಂಕ್ಗಳ ಮೂಲಕ ದುಡಿಯುವ ಬಂಡವಾಳವನ್ನು ಸಾಲವನ್ನಾಗಿ ಪಡೆಯಲು ಹಾಗೂ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 2ರಿಂದ ಶೇ 4ರಷ್ಟನ್ನು ಕೇಂದ್ರ ಸರ್ಕಾರದಿಂದ ಭರಿಸಲು, ಕೇಂದ್ರ ಸರ್ಕಾರವು ಒಟ್ಟು ₹100 ಕೋಟಿಗಳನ್ನು ಕಾಯ್ದಿರಿಸಿದೆ. ಇದರಿಂದ ರಾಜ್ಯದ ರೈತರಿಗೂ ಅನುಕೂಲವಾಗಲಿದೆ’ ಎಂದು ಅದು ಹೇಳಿದೆ.</p>.<p>‘ಹಾಲು ಉತ್ಪಾದಕರಿಗೆ ಅಚಲ ಹಾಗೂ ನಿರಂತರವಾದ ಮಾರುಕಟ್ಟೆಯನ್ನು ಒದಗಿಸಲು, ಹಾಲು ಉತ್ಪಾದಿಸುವ ರೈತರಿಗೆ ಸಕಾಲದಲ್ಲಿ ಹಣ ಬಟವಾಡೆ ಮಾಡಲು, ಹಾಲು ಉತ್ಪನ್ನಗಳಿಗೆ ಉತ್ತಮ ದರ ದೊರಕಿಸಿ ಕೊಡಲು ಹಾಗೂ ಡೇರಿ ಉದ್ಯಮದ ಕಾರ್ಯ ಚಟುವಟಿಕೆಯನ್ನು ಯಾವುದೇ ಆಡಚಣೆಯಿಲ್ಲದೆ ನಿರ್ವಹಣೆ ಮಾಡಲು ಈ ಅನುದಾನದಿಂದ ಸಾಧ್ಯವಾಗಲಿದೆ’ ಎಂದು ಕೆಎಂಎಫ್ ಹೇಳಿದೆ.</p>.<p>‘ಜಾನುವಾರು ಲಸಿಕಾ ಕಾರ್ಯಕ್ರಮಕ್ಕೆ ₹13,343 ಕೋಟಿ ಘೋಷಣೆ ಮಾಡಿರುವುದೂ ಸ್ವಾಗತಾರ್ಹ ಕ್ರಮ’ ಎಂದು ಮಹಾಮಂಡಲ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹಾಲು ಉತ್ಪಾದಕರ ಸಂಘ, ಡೇರಿ ಹಾಗೂ ಹೈನುಗಾರಿಕೆಯ ಘಟಕಗಳ ಮೂಲಸೌಲಭ್ಯ ಅಭಿವೃದ್ಧಿಗೆ ₹15 ಸಾವಿರ ಕೋಟಿ ನೆರವು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್) ಕೃತಜ್ಞತೆ ಸಲ್ಲಿಸಿದೆ.</p>.<p>‘ಕೋವಿಡ್-19 ರಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆ ಕುಸಿದಿರುವ ಕಾರಣ ಹಾಲಿನ ಪುಡಿ,<br />ಬೆಣ್ಣೆ, ತುಪ್ಪ ಮುಂತಾದ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಾಗಿ ಹದಗೆಡುವ ಅಪಾಯವಿದೆ. ಇದರಿಂದಾಗಿ ಈ ವಲಯವು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇತ್ತು. ಇದನ್ನು ಅರಿತು ಕೂಡಲೇ ನೆರವು ಘೋಷಿಸಿರುವ ಕೇಂದ್ರ ಸರ್ಕಾರಕ್ಕೆ ವಂದನೆಗಳು’ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಬ್ಯಾಂಕ್ಗಳ ಮೂಲಕ ದುಡಿಯುವ ಬಂಡವಾಳವನ್ನು ಸಾಲವನ್ನಾಗಿ ಪಡೆಯಲು ಹಾಗೂ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 2ರಿಂದ ಶೇ 4ರಷ್ಟನ್ನು ಕೇಂದ್ರ ಸರ್ಕಾರದಿಂದ ಭರಿಸಲು, ಕೇಂದ್ರ ಸರ್ಕಾರವು ಒಟ್ಟು ₹100 ಕೋಟಿಗಳನ್ನು ಕಾಯ್ದಿರಿಸಿದೆ. ಇದರಿಂದ ರಾಜ್ಯದ ರೈತರಿಗೂ ಅನುಕೂಲವಾಗಲಿದೆ’ ಎಂದು ಅದು ಹೇಳಿದೆ.</p>.<p>‘ಹಾಲು ಉತ್ಪಾದಕರಿಗೆ ಅಚಲ ಹಾಗೂ ನಿರಂತರವಾದ ಮಾರುಕಟ್ಟೆಯನ್ನು ಒದಗಿಸಲು, ಹಾಲು ಉತ್ಪಾದಿಸುವ ರೈತರಿಗೆ ಸಕಾಲದಲ್ಲಿ ಹಣ ಬಟವಾಡೆ ಮಾಡಲು, ಹಾಲು ಉತ್ಪನ್ನಗಳಿಗೆ ಉತ್ತಮ ದರ ದೊರಕಿಸಿ ಕೊಡಲು ಹಾಗೂ ಡೇರಿ ಉದ್ಯಮದ ಕಾರ್ಯ ಚಟುವಟಿಕೆಯನ್ನು ಯಾವುದೇ ಆಡಚಣೆಯಿಲ್ಲದೆ ನಿರ್ವಹಣೆ ಮಾಡಲು ಈ ಅನುದಾನದಿಂದ ಸಾಧ್ಯವಾಗಲಿದೆ’ ಎಂದು ಕೆಎಂಎಫ್ ಹೇಳಿದೆ.</p>.<p>‘ಜಾನುವಾರು ಲಸಿಕಾ ಕಾರ್ಯಕ್ರಮಕ್ಕೆ ₹13,343 ಕೋಟಿ ಘೋಷಣೆ ಮಾಡಿರುವುದೂ ಸ್ವಾಗತಾರ್ಹ ಕ್ರಮ’ ಎಂದು ಮಹಾಮಂಡಲ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>