<p><strong>ಬೆಂಗಳೂರು: ‘</strong>ಎಂಜಿನಿಯರ್ಗಳ ಬಡ್ತಿಗೆ ಮುಖ್ಯಮಂತ್ರಿ ಹೆಸರಿನಲ್ಲೇ ₹4.50 ಕೋಟಿ ಲಂಚ ಪಡೆಯಲಾಗಿದೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಎಸ್ಆರ್) ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ದೂರು ನೀಡಿದೆ.</p>.<p>ಬಿಬಿಎಂಪಿಯ 65 ಎಂಜಿನಿಯರ್ಗಳ ಬಡ್ತಿಗೆ ಸಂಬಂಧಿಸಿದ ಕಡತ ನಗರಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಇದೆ. ಸಹಾಯಕ ಎಂಜಿನಿಯರ್ (ಎ.ಇ) ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) 40 ಹುದ್ದೆಗೆ, ಎಇಇ ಹುದ್ದೆಯಿಂದ ಕಾರ್ಯಪಾಲಕ ಎಂಜಿನಿಯರ್ (ಇ.ಇ) 7 ಹುದ್ದೆಗೆ, ಇ.ಇ ಹುದ್ದೆಯಿಂದ ಸೂಪರಿಂಟೆಂಡೆಂಟ್ ಎಂಜಿನಿಯರ್ (ಎಸ್.ಇ) 5 ಹುದ್ದೆಗೆ ಪಟ್ಟಿ ಬಾಕಿ ಉಳಿದುಕೊಂಡಿದೆ.</p>.<p>‘ಈ ಕಡತ ಅನುಮೋದಿಸಲು ಲಂಚ ಪಡೆಯಲಾಗುತ್ತಿದೆ. ನಿಮ್ಮ ಹೆಸರೇಳಿ ₹4.50 ಕೋಟಿ ಬೇಡಿಕೆ ಇಟ್ಟು ಹಣ ಪಡೆಯಲಾಗಿದೆ. ಎ.ಇ ಹುದ್ದೆಯಿಂದ ಎಇಇ ಹುದ್ದೆಗೆ ಬಡ್ತಿ ಪಡೆಯಲು ₹2 ಕೋಟಿ, ಎಇಇ ಹುದ್ದೆಯಿಂದ ಇ.ಇ ಹುದ್ದೆಗೆ ₹1 ಕೋಟಿ ಮತ್ತು ಇ.ಇ ಹುದ್ದೆಯಿಂದ ಎಸ್.ಇ ಹುದ್ದೆಗೆ ₹1.50 ಕೋಟಿ ಲಂಚದ ವ್ಯವಹಾರ ನಡೆದಿದೆ. ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ. ಈ ರೀತಿ ಅಪಾರ ಪ್ರಮಾಣದ ಲಂಚ ಪಾವತಿಸಲು ಬಿಬಿಎಂಪಿ ಎಂಜಿನಿಯರ್ಗಳು ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿದ್ದಾರೆ. ಸ್ವಲ್ಪ ಪ್ರಾಮಾಣಿಕತೆ ಉಳಿಸಿಕೊಂಡವರೂ ವಿಧಿಯಿಲ್ಲದೆ ಸಾಲ ಮಾಡಿ ಲಂಚ ನೀಡಿದ್ದಾರೆ’ ಎಂದು ಕೆಎಸ್ಆರ್ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಪದೇ ಪದೇ ಮುಖ್ಯಮಂತ್ರಿ ಮತ್ತು ಅವರ ಸಚಿವಾಲಯದ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಲೇ ಇದೆ. ಆದರೂ, ಈ ಬಗ್ಗೆ ಯಾವುದೇ ಕ್ರಮ ಅಗದಿರುವುದು ಮುಖ್ಯಮಂತ್ರಿ ಸಚಿವಾಲಯದ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.</p>.<p>‘ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಆಡಳಿತ ಅಧೋಗತಿಗೆ ಹೋಗಿದೆ ಎಂದು ಪದೇ ಪದೇ ಹೈಕೋರ್ಟ್ ಛೀಮಾರಿ ಹಾಕುತ್ತಿದೆ. ಎಂಜಿನಿಯರ್ಗಳ ಬಡ್ತಿಯಲ್ಲಿ ನಡೆದಿರುವ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಎಂಜಿನಿಯರ್ಗಳ ಬಡ್ತಿಗೆ ಮುಖ್ಯಮಂತ್ರಿ ಹೆಸರಿನಲ್ಲೇ ₹4.50 ಕೋಟಿ ಲಂಚ ಪಡೆಯಲಾಗಿದೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಎಸ್ಆರ್) ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ದೂರು ನೀಡಿದೆ.</p>.<p>ಬಿಬಿಎಂಪಿಯ 65 ಎಂಜಿನಿಯರ್ಗಳ ಬಡ್ತಿಗೆ ಸಂಬಂಧಿಸಿದ ಕಡತ ನಗರಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಇದೆ. ಸಹಾಯಕ ಎಂಜಿನಿಯರ್ (ಎ.ಇ) ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) 40 ಹುದ್ದೆಗೆ, ಎಇಇ ಹುದ್ದೆಯಿಂದ ಕಾರ್ಯಪಾಲಕ ಎಂಜಿನಿಯರ್ (ಇ.ಇ) 7 ಹುದ್ದೆಗೆ, ಇ.ಇ ಹುದ್ದೆಯಿಂದ ಸೂಪರಿಂಟೆಂಡೆಂಟ್ ಎಂಜಿನಿಯರ್ (ಎಸ್.ಇ) 5 ಹುದ್ದೆಗೆ ಪಟ್ಟಿ ಬಾಕಿ ಉಳಿದುಕೊಂಡಿದೆ.</p>.<p>‘ಈ ಕಡತ ಅನುಮೋದಿಸಲು ಲಂಚ ಪಡೆಯಲಾಗುತ್ತಿದೆ. ನಿಮ್ಮ ಹೆಸರೇಳಿ ₹4.50 ಕೋಟಿ ಬೇಡಿಕೆ ಇಟ್ಟು ಹಣ ಪಡೆಯಲಾಗಿದೆ. ಎ.ಇ ಹುದ್ದೆಯಿಂದ ಎಇಇ ಹುದ್ದೆಗೆ ಬಡ್ತಿ ಪಡೆಯಲು ₹2 ಕೋಟಿ, ಎಇಇ ಹುದ್ದೆಯಿಂದ ಇ.ಇ ಹುದ್ದೆಗೆ ₹1 ಕೋಟಿ ಮತ್ತು ಇ.ಇ ಹುದ್ದೆಯಿಂದ ಎಸ್.ಇ ಹುದ್ದೆಗೆ ₹1.50 ಕೋಟಿ ಲಂಚದ ವ್ಯವಹಾರ ನಡೆದಿದೆ. ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ. ಈ ರೀತಿ ಅಪಾರ ಪ್ರಮಾಣದ ಲಂಚ ಪಾವತಿಸಲು ಬಿಬಿಎಂಪಿ ಎಂಜಿನಿಯರ್ಗಳು ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿದ್ದಾರೆ. ಸ್ವಲ್ಪ ಪ್ರಾಮಾಣಿಕತೆ ಉಳಿಸಿಕೊಂಡವರೂ ವಿಧಿಯಿಲ್ಲದೆ ಸಾಲ ಮಾಡಿ ಲಂಚ ನೀಡಿದ್ದಾರೆ’ ಎಂದು ಕೆಎಸ್ಆರ್ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಪದೇ ಪದೇ ಮುಖ್ಯಮಂತ್ರಿ ಮತ್ತು ಅವರ ಸಚಿವಾಲಯದ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಲೇ ಇದೆ. ಆದರೂ, ಈ ಬಗ್ಗೆ ಯಾವುದೇ ಕ್ರಮ ಅಗದಿರುವುದು ಮುಖ್ಯಮಂತ್ರಿ ಸಚಿವಾಲಯದ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.</p>.<p>‘ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಆಡಳಿತ ಅಧೋಗತಿಗೆ ಹೋಗಿದೆ ಎಂದು ಪದೇ ಪದೇ ಹೈಕೋರ್ಟ್ ಛೀಮಾರಿ ಹಾಕುತ್ತಿದೆ. ಎಂಜಿನಿಯರ್ಗಳ ಬಡ್ತಿಯಲ್ಲಿ ನಡೆದಿರುವ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>