<p><strong>ಬೆಂಗಳೂರು:</strong>ರಾಜ್ಯ ಸರ್ಕಾರವು ‘ನೂತನ ಸಮಗ್ರ ಪ್ರದೇಶ ಯೋಜನೆ’ಯ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರನ್ವಯ, ರಾಜ್ಯ ರಸ್ತೆ ನಿಗಮದ ಬಸ್ಗಳು ಮಾತ್ರ ಪ್ರಯಾಣಿಕ ಸೇವೆಯನ್ನು ನೀಡಲಿವೆ. ಕರ್ನಾಟಕದಾದ್ಯಂತ ಈ ನಿಯಮ ಅನ್ವಯವಾಗಲಿದೆ. ಆದರೆ, ಈಗಾಗಲೇ ಪ್ರಯಾಣಿಕ ಸೇವೆ ನೀಡುವ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳಿಗೆ ಇದು ಅನ್ವಯವಾಗದು.</p>.<p>2017ರ ಸೆ. 28ರಿಂದ ಅನ್ವಯವಾಗುವಂತೆ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳು ಪ್ರಯಾಣಿಕ ಸೇವೆ ನೀಡಬಹುದು. ಆದರೆ, ಇನ್ನು ಮುಂದೆ ಖಾಸಗಿ ಸಂಸ್ಥೆಗಳಿಗೆ ಪ್ರಯಾಣಿಕ ಸೇವೆಗೆ ಹೊಸ ಪರವಾನಗಿ ನೀಡ ಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿದೆ.</p>.<p>ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ, 2016ರಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಬಲಪಡಿಸುವುದು ಮತ್ತು ನೂತನ ಮೋಟಾರು ವಾಹನ ಕಾಯ್ದೆಯ ಪರಿಣಾಮಗಳಿಂದ ಇವುಗಳನ್ನು ಪಾರು ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಅವರು ಮುಂದಾಗಿದ್ದರು.</p>.<p>‘ದಕ್ಷಿಣ ಭಾರತದ ರಾಜ್ಯಗಳು ಸಾರಿಗೆ ನಿಗಮಗಳು ಈ ನೀತಿ ಅಳವಡಿಸಿ ಕೊಂಡು ಲಾಭದಲ್ಲಿ ನಡೆಯುತ್ತಿವೆ. ಹೊಸ ಕಾಯ್ದೆ ಜಾರಿಗೆ ಬಂದರೆ, ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಸ್ಪರ್ಧೆ ಹೆಚ್ಚಲಿದೆ ಮತ್ತು ಇದರಿಂದ ಲಕ್ಷಾಂತರ ಜನರ ಮೇಲೆ ಪರಿಣಾಮವಾಗಲಿದೆ. ಈ ನಿಟ್ಟಿನಿಂದ ಪ್ರಯಾಣಿಕ ಸೇವೆಗಳನ್ನು ರಾಜ್ಯ ಸಾರಿಗೆ ನಿಗಮಗಳು ಮಾತ್ರ ನೀಡುವುದು ಉತ್ತಮ’ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ರಾಜ್ಯ ಸರ್ಕಾರವು ‘ನೂತನ ಸಮಗ್ರ ಪ್ರದೇಶ ಯೋಜನೆ’ಯ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರನ್ವಯ, ರಾಜ್ಯ ರಸ್ತೆ ನಿಗಮದ ಬಸ್ಗಳು ಮಾತ್ರ ಪ್ರಯಾಣಿಕ ಸೇವೆಯನ್ನು ನೀಡಲಿವೆ. ಕರ್ನಾಟಕದಾದ್ಯಂತ ಈ ನಿಯಮ ಅನ್ವಯವಾಗಲಿದೆ. ಆದರೆ, ಈಗಾಗಲೇ ಪ್ರಯಾಣಿಕ ಸೇವೆ ನೀಡುವ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳಿಗೆ ಇದು ಅನ್ವಯವಾಗದು.</p>.<p>2017ರ ಸೆ. 28ರಿಂದ ಅನ್ವಯವಾಗುವಂತೆ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳು ಪ್ರಯಾಣಿಕ ಸೇವೆ ನೀಡಬಹುದು. ಆದರೆ, ಇನ್ನು ಮುಂದೆ ಖಾಸಗಿ ಸಂಸ್ಥೆಗಳಿಗೆ ಪ್ರಯಾಣಿಕ ಸೇವೆಗೆ ಹೊಸ ಪರವಾನಗಿ ನೀಡ ಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿದೆ.</p>.<p>ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ, 2016ರಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಬಲಪಡಿಸುವುದು ಮತ್ತು ನೂತನ ಮೋಟಾರು ವಾಹನ ಕಾಯ್ದೆಯ ಪರಿಣಾಮಗಳಿಂದ ಇವುಗಳನ್ನು ಪಾರು ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಅವರು ಮುಂದಾಗಿದ್ದರು.</p>.<p>‘ದಕ್ಷಿಣ ಭಾರತದ ರಾಜ್ಯಗಳು ಸಾರಿಗೆ ನಿಗಮಗಳು ಈ ನೀತಿ ಅಳವಡಿಸಿ ಕೊಂಡು ಲಾಭದಲ್ಲಿ ನಡೆಯುತ್ತಿವೆ. ಹೊಸ ಕಾಯ್ದೆ ಜಾರಿಗೆ ಬಂದರೆ, ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಸ್ಪರ್ಧೆ ಹೆಚ್ಚಲಿದೆ ಮತ್ತು ಇದರಿಂದ ಲಕ್ಷಾಂತರ ಜನರ ಮೇಲೆ ಪರಿಣಾಮವಾಗಲಿದೆ. ಈ ನಿಟ್ಟಿನಿಂದ ಪ್ರಯಾಣಿಕ ಸೇವೆಗಳನ್ನು ರಾಜ್ಯ ಸಾರಿಗೆ ನಿಗಮಗಳು ಮಾತ್ರ ನೀಡುವುದು ಉತ್ತಮ’ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>