ಬೆಂಗಳೂರು:ರಾಜ್ಯ ಸರ್ಕಾರವು ‘ನೂತನ ಸಮಗ್ರ ಪ್ರದೇಶ ಯೋಜನೆ’ಯ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಇದರನ್ವಯ, ರಾಜ್ಯ ರಸ್ತೆ ನಿಗಮದ ಬಸ್ಗಳು ಮಾತ್ರ ಪ್ರಯಾಣಿಕ ಸೇವೆಯನ್ನು ನೀಡಲಿವೆ. ಕರ್ನಾಟಕದಾದ್ಯಂತ ಈ ನಿಯಮ ಅನ್ವಯವಾಗಲಿದೆ. ಆದರೆ, ಈಗಾಗಲೇ ಪ್ರಯಾಣಿಕ ಸೇವೆ ನೀಡುವ ಪರವಾನಗಿ ಪಡೆದಿರುವ ಖಾಸಗಿ ಸಂಸ್ಥೆಗಳಿಗೆ ಇದು ಅನ್ವಯವಾಗದು.