ಮೆಜೆಸ್ಟಿಕ್ ಸೇರಿ ಪ್ರಮುksrtಖ ಬಸ್ ನಿಲ್ದಾಣ, ಡಿಪೊಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ‘ಸಾರ್ವಜನಿಕರೇ ಕ್ಷಮಿಸಿ, ಸರ್ಕಾರ ನಮಗೆ ನೀಡಿದ ಭರವಸೆ ಮರೆತಿದೆ’, ‘6ನೇ ವೇತನ ಆಯೋಗದ ಆದೇಶ– ಸಾರಿಗೆ ನೌಕರರಿಗೆ ವಿಕಾಸ’, ‘ವೇತನ ಮತ್ತು ಸವಲತ್ತುಗಳಲ್ಲಿ ತಾರತಮ್ಯ ಆಗುತ್ತಿದೆ’, ‘ಸಾರಿಗೆ ನೌಕರರ ಸಮರಕ್ಕೂ ಸಿದ್ಧ, ಸಾವಿಗೂ ಸಿದ್ಧ’ ಎಂಬ ಭಿತ್ತಿಪತ್ರಗಳನ್ನು ನೌಕರರು ಪ್ರದರ್ಶಿಸಿದರು. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚಿ, ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.