ಅಡ್ವಾಣಿ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವ ಕೇಂದ್ರ ಸರ್ಕಾರದ ತೀರ್ಮಾನದ ಕುರಿತು ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸುವ ಹೋರಾಟದಲ್ಲಿ ಅಡ್ವಾಣಿಯವರು ಭಾಗವಹಿಸಿದ್ದರು. ರಾಮ ಮಂದಿರ ನಿರ್ಮಾಣಕ್ಕಾಗಿ ರಥ ಯಾತ್ರೆಯನ್ನೂ ನಡೆಸಿದ್ದರು. ಎರಡೂ ಹೋರಾಟಗಳಲ್ಲಿ ನಾನು ಅವರೊಂದಿಗೆ ಭಾಗವಹಿಸಿದ್ದೆ’ ಎಂದು ಹೇಳಿದರು.