‘ಕಣ್ಣಿಗೆ ಗಾಯವಾಗುವಿಕೆ, ಅಪಘಾತ, ಜೀವಸತ್ವದ ಕೊರತೆ, ಆನುವಂಶಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ನೇತ್ರವನ್ನು ದಾನ ಮಾಡಿದಲ್ಲಿ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಸಾಧ್ಯ. ಹಾಗಾಗಿ, ಮರಣಾನಂತರ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈಗೊಳ್ಳಬೇಕು. ಆಗ ‘ಕಾರ್ನಿಯಲ್’ ಅಂಧತ್ವದಿಂದ ಪಾರು ಮಾಡಲು ಸಾಧ್ಯ. ಈಗಾಗಲೇ ನೇತ್ರ ದಾನ ಮಾಡಿದವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.