<p><strong>ಬೆಂಗಳೂರು: </strong>ಕೊರೊನಾ ವೈರಾಣು ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ನಗರದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.</p>.<p>ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಲಾಕ್ಡೌನ್ ಸಮಯದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.</p>.<p>’ಬೆಂಗಳೂರು ಜನರು ಈಗಾಗಲೇ ಲಾಕ್ಡೌನ್ಗಳನ್ನು ನೋಡಿದ್ದಾರೆ. ಅವರಿಗೆ ಈ ಲಾಕ್ಡೌನ್ ಹೊಸದಲ್ಲ. ಲಾಕ್ಡೌನ್ ಭದ್ರತೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಬಾರದು’ ಎಂದೂ ಹೇಳಿದರು.</p>.<p>‘ಅಗತ್ಯ ವಸ್ತುಗಳು, ತರಕಾಡಿ, ದಿನಸಿ ಅಂಗಡಿಗಳು ಯಥಾಪ್ರಕಾರ ಇರಲಿವೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ತೆರೆದಿರಲಿವೆ. ಹೋಟೆಲ್ಗಳೂ ಇರಲಿದ್ದು, ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಮಾಂಸದ ಅಂಗಡಿಗಳಿಗೂ ಅವಕಾಶ ನೀಡಲಾಗಿದೆ’ ಎಂದರು.</p>.<p class="Subhead"><strong>ಮೃತ ಪೊಲೀಸರಿಗೆ ಶ್ರದ್ಧಾಂಜಲಿ:</strong>ಕೊರೊನಾ ಸೋಂಕು ತಗುಲಿ ಮೃತಪಟ್ಟ ನಗರದ ಐವರು ಪೊಲೀಸರಿಗೆ ಕಮಿಷನರ್ ಭಾಸ್ಕರ್ ರಾವ್ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ಕಮಿಷನರ್ ಕಚೇರಿಯಲ್ಲಿ ಐದು ಪೊಲೀಸರ ಫೋಟೊಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.</p>.<p><strong>ಏನಿರುತ್ತೆ?</strong><br />ಅಗತ್ಯ ವಸ್ತುಗಳು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹೋಟೆಲ್ಗಳು (ಪಾರ್ಸೆಲ್ ಮಾತ್ರ), ಮಾಂಸದ ಅಂಗಡಿ.</p>.<p><strong>ಏನಿರಲ್ಲ?</strong><br />ಬಸ್, ಆಟೊ, ಕ್ಯಾಬ್, ಟ್ಯಾಕ್ಸಿ, ಮದ್ಯದ ಅಂಗಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೊರೊನಾ ವೈರಾಣು ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ನಗರದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.</p>.<p>ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಲಾಕ್ಡೌನ್ ಸಮಯದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.</p>.<p>’ಬೆಂಗಳೂರು ಜನರು ಈಗಾಗಲೇ ಲಾಕ್ಡೌನ್ಗಳನ್ನು ನೋಡಿದ್ದಾರೆ. ಅವರಿಗೆ ಈ ಲಾಕ್ಡೌನ್ ಹೊಸದಲ್ಲ. ಲಾಕ್ಡೌನ್ ಭದ್ರತೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಬಾರದು’ ಎಂದೂ ಹೇಳಿದರು.</p>.<p>‘ಅಗತ್ಯ ವಸ್ತುಗಳು, ತರಕಾಡಿ, ದಿನಸಿ ಅಂಗಡಿಗಳು ಯಥಾಪ್ರಕಾರ ಇರಲಿವೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ತೆರೆದಿರಲಿವೆ. ಹೋಟೆಲ್ಗಳೂ ಇರಲಿದ್ದು, ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಮಾಂಸದ ಅಂಗಡಿಗಳಿಗೂ ಅವಕಾಶ ನೀಡಲಾಗಿದೆ’ ಎಂದರು.</p>.<p class="Subhead"><strong>ಮೃತ ಪೊಲೀಸರಿಗೆ ಶ್ರದ್ಧಾಂಜಲಿ:</strong>ಕೊರೊನಾ ಸೋಂಕು ತಗುಲಿ ಮೃತಪಟ್ಟ ನಗರದ ಐವರು ಪೊಲೀಸರಿಗೆ ಕಮಿಷನರ್ ಭಾಸ್ಕರ್ ರಾವ್ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ಕಮಿಷನರ್ ಕಚೇರಿಯಲ್ಲಿ ಐದು ಪೊಲೀಸರ ಫೋಟೊಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.</p>.<p><strong>ಏನಿರುತ್ತೆ?</strong><br />ಅಗತ್ಯ ವಸ್ತುಗಳು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹೋಟೆಲ್ಗಳು (ಪಾರ್ಸೆಲ್ ಮಾತ್ರ), ಮಾಂಸದ ಅಂಗಡಿ.</p>.<p><strong>ಏನಿರಲ್ಲ?</strong><br />ಬಸ್, ಆಟೊ, ಕ್ಯಾಬ್, ಟ್ಯಾಕ್ಸಿ, ಮದ್ಯದ ಅಂಗಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>