ಬೆಂಗಳೂರು: ಯಲಹಂಕ ತಾಲ್ಲೂಕಿನ ಹುಣಸಮಾರನಹಳ್ಳಿ ಶ್ರೀ ಮದ್ದೇವಣಾಪುರ ದೇವ ಸಿಂಹಾಸನಾ ಮಠಕ್ಕೆ ಪೀಠಾಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕು ಎಂದು ಮಠದ ಅಧ್ಯಕ್ಷ ಎಸ್.ಎ. ರುದ್ರಾರಾಧ್ಯ ಒತ್ತಾಯಿಸಿದರು.
‘ಮಠಕ್ಕೆ ಪೀಠಾಧಿಪತಿಯಾಗಿದ್ದ ಗುರುನಂಜೇಶ್ವರಸ್ವಾಮಿ ಅವರನ್ನು ದುರ್ವತನೆ ಕಾರಣಕ್ಕೆ ವಜಾಗೊಳಿಸಲಾಗಿದೆ. ಆದರೆ, ಈಗಲೂ ನಾನೇ ಪೀಠಾಧ್ಯಕ್ಷ ಎಂದು ಹೇಳಿಕೊಂಡು ಮಠದ ಆಸ್ತಿ ದೋಚುವ ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.