<p><strong>ಬೆಂಗಳೂರು:</strong> ನಗರದ ಹೃದಯಭಾಗದಲ್ಲಿ ಇರುವ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣಕ್ಕೆ ಪಾದಚಾರಿಗಳು ಸುಲಭವಾಗಿ ಹಾದು ಹೋಗಲು ನಿರ್ಮಿಸಿರುವ ಕೆಳಸೇತುವೆ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.</p><p>ಗೋಡೆಗಳ ಮೇಲೆ ಪಾನ್ ಉಗುಳಿನ ಕಲೆ, ಕಿತ್ತುಹೋದ ನೆಲಹಾಸು, ಅಲ್ಲಲ್ಲಿ ಚೆಲ್ಲಿರುವ ತಿನಿಸುಗಳು, ಸೇದಿ ಬಿಸಾಡಿದ ಬೀಡಿ–ಸಿಗರೇಟ್ ತುಂಡುಗಳು, ಮದ್ಯ ಸೇವಿಸಿ ಎಸೆದಿರುವ ಪ್ಯಾಕೆಟ್ಗಳು, ಮೂತ್ರದ ವಾಸನೆಯ ನಡುವೆಯೇ ನಿತ್ಯ ಸಾವಿರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ಇದೆ.</p><p>2016ರಲ್ಲಿ ‘ನಮ್ಮ ಮೆಟ್ರೊ’ ಉದ್ಘಾಟನೆ ವೇಳೆ ಕೆಳಸೇತುವೆ ಪಾದಚಾರಿ ಮಾರ್ಗದ ನವೀಕರಣದ ಕೆಲಸಗಳಾಗಿದ್ದವು. ಆ ನಂತರ ಇದರ ನಿರ್ವಹಣೆಯೇ ಆಗಿಲ್ಲ. ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.</p><p>ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ, ಕೆಳಸೇತುವೆ ಮಾರ್ಗ ಬಳಸುವುದು ಪಾದಚಾರಿಗಳಿಗೆ ಅನಿವಾರ್ಯ. ಆದರೆ ಶುಚಿಯಿಲ್ಲದ ಇಲ್ಲಿನ ವಾತಾವರಣ ಹೇಸಿಗೆ ತರಿಸುತ್ತದೆ ಎಂದು ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><p>‘ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಂದ ಹೊರ ಬರುವ ಪ್ರಯಾಣಿಕರನ್ನು ಸ್ವಾಗತಿಸುವ ರೀತಿ ಈ ಕೆಳಸೇತುವೆಗಳು ನಳನಳಿಸುವಂತಿರಬೇಕು. ಆದರೆ ಇಲ್ಲಿ ತದ್ವಿರುದ್ಧವಾಗಿದೆ. ಮೊದಲ ಬಾರಿಗೆ ನಗರಕ್ಕೆ ಬಂದವರು ಮತ್ತೆಂದಿಗೂ ಇಲ್ಲಿ ಸುಳಿಯಬಾರದು ಎಂಬ ನಿರ್ಣಯಕ್ಕೆ ಬರುತ್ತಾರೆ’ ಎಂದು ಜಿ.ಆರ್.ಪ್ರೀತಮ್ ಹೇಳಿದರು.</p><p>‘ಈ ಕೆಳಸೇತುವೆ ನಿರಾಶ್ರಿತರು ಮತ್ತು ಭಿಕ್ಷುಕರಿಗೆ ಆಶ್ರಯ ತಾಣವಾಗಿದೆ. ಮದ್ಯವ್ಯಸನಿಗಳು ಇಲ್ಲೇ ಇರುತ್ತಾರೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಆತಂಕಪಡುವ ಸ್ಥಿತಿ ಎದುರಾಗಿದೆ. ಇಲ್ಲಿ ಸುರಕ್ಷತೆ ವಾತಾವರಣ ನಿರ್ಮಾಣವಾಗಬೇಕು’ ಎಂದು ರಕ್ಷಿತಾ ಸಿದ್ದರಾಜು ಅಭಿಪ್ರಾಯಪಟ್ಟರು.</p><p><strong>‘ಹಣಕ್ಕೆ ಪೀಡಿಸುತ್ತಾರೆ’</strong></p><p>‘ಲಿಂಗತ್ವ ಅಲ್ಪಸಂಖ್ಯಾತರು ಹಣಕ್ಕಾಗಿ ಪೀಡಿಸುತ್ತಾರೆ. ನಿರ್ಲಕ್ಷಿಸಿ ಮುಂದೆ ಸಾಗಿದರೂ ಬಿಡದೇ ಕೈಹಿಡಿದು ಎಳೆದಾಡಿ ಬಲವಂತದಿಂದ ಹಣ ವಸೂಲಿ ಮಾಡುತ್ತಾರೆ. ಇಂಥವರಿಂದ ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕು’ ಎಂದು ಪಾದಚಾರಿ ಹೇಮಂತ್ ಜಿ.ಎಸ್. ಆಗ್ರಹಿಸಿದರು.</p><p>‘ಒಂದೆಡೆ ಭಿಕ್ಷಾಟನೆ ಮಾಡುವವರ ಕಾಟ. ಮತ್ತೊಂದೆಡೆ ಲೈಂಗಿಕ ಕಾರ್ಯಕರ್ತೆಯರ ಹಾವಳಿ. ಇದರಿಂದ ಉಸಿರುಗಟ್ಟುವ ವಾತಾವರಣ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><blockquote>ಸಿ.ಸಿ.ಟಿ.ವಿ ಕ್ಯಾಮೆರಾಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಸೂಕ್ತ ನಿರ್ವಹಣೆ ಆಗಬೇಕು</blockquote><span class="attribution">ನೂರ್ ಮೊಹಮ್ಮದ್, ಬಟ್ಟೆ ವ್ಯಾಪಾರಿ</span></div>.<div><blockquote>ಸಂಯೋಜಿತ ವ್ಯಾಪಾರ ವ್ಯವಸ್ಥೆ ಕಲ್ಪಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಟೈಲ್ಸ್ ಬದಲಿಸಬೇಕು. ಚಾವಣಿ ಮತ್ತು ಗೋಡೆಗಳಿಗೆ ಸುಣ್ಣಬಣ್ಣ ಬಳಿಯಬೇಕು</blockquote><span class="attribution">ಶರತ್ ಕೆ.ಆರ್., ಪ್ರಯಾಣಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಹೃದಯಭಾಗದಲ್ಲಿ ಇರುವ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣಕ್ಕೆ ಪಾದಚಾರಿಗಳು ಸುಲಭವಾಗಿ ಹಾದು ಹೋಗಲು ನಿರ್ಮಿಸಿರುವ ಕೆಳಸೇತುವೆ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.</p><p>ಗೋಡೆಗಳ ಮೇಲೆ ಪಾನ್ ಉಗುಳಿನ ಕಲೆ, ಕಿತ್ತುಹೋದ ನೆಲಹಾಸು, ಅಲ್ಲಲ್ಲಿ ಚೆಲ್ಲಿರುವ ತಿನಿಸುಗಳು, ಸೇದಿ ಬಿಸಾಡಿದ ಬೀಡಿ–ಸಿಗರೇಟ್ ತುಂಡುಗಳು, ಮದ್ಯ ಸೇವಿಸಿ ಎಸೆದಿರುವ ಪ್ಯಾಕೆಟ್ಗಳು, ಮೂತ್ರದ ವಾಸನೆಯ ನಡುವೆಯೇ ನಿತ್ಯ ಸಾವಿರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ಇದೆ.</p><p>2016ರಲ್ಲಿ ‘ನಮ್ಮ ಮೆಟ್ರೊ’ ಉದ್ಘಾಟನೆ ವೇಳೆ ಕೆಳಸೇತುವೆ ಪಾದಚಾರಿ ಮಾರ್ಗದ ನವೀಕರಣದ ಕೆಲಸಗಳಾಗಿದ್ದವು. ಆ ನಂತರ ಇದರ ನಿರ್ವಹಣೆಯೇ ಆಗಿಲ್ಲ. ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.</p><p>ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ, ಕೆಳಸೇತುವೆ ಮಾರ್ಗ ಬಳಸುವುದು ಪಾದಚಾರಿಗಳಿಗೆ ಅನಿವಾರ್ಯ. ಆದರೆ ಶುಚಿಯಿಲ್ಲದ ಇಲ್ಲಿನ ವಾತಾವರಣ ಹೇಸಿಗೆ ತರಿಸುತ್ತದೆ ಎಂದು ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><p>‘ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಂದ ಹೊರ ಬರುವ ಪ್ರಯಾಣಿಕರನ್ನು ಸ್ವಾಗತಿಸುವ ರೀತಿ ಈ ಕೆಳಸೇತುವೆಗಳು ನಳನಳಿಸುವಂತಿರಬೇಕು. ಆದರೆ ಇಲ್ಲಿ ತದ್ವಿರುದ್ಧವಾಗಿದೆ. ಮೊದಲ ಬಾರಿಗೆ ನಗರಕ್ಕೆ ಬಂದವರು ಮತ್ತೆಂದಿಗೂ ಇಲ್ಲಿ ಸುಳಿಯಬಾರದು ಎಂಬ ನಿರ್ಣಯಕ್ಕೆ ಬರುತ್ತಾರೆ’ ಎಂದು ಜಿ.ಆರ್.ಪ್ರೀತಮ್ ಹೇಳಿದರು.</p><p>‘ಈ ಕೆಳಸೇತುವೆ ನಿರಾಶ್ರಿತರು ಮತ್ತು ಭಿಕ್ಷುಕರಿಗೆ ಆಶ್ರಯ ತಾಣವಾಗಿದೆ. ಮದ್ಯವ್ಯಸನಿಗಳು ಇಲ್ಲೇ ಇರುತ್ತಾರೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಆತಂಕಪಡುವ ಸ್ಥಿತಿ ಎದುರಾಗಿದೆ. ಇಲ್ಲಿ ಸುರಕ್ಷತೆ ವಾತಾವರಣ ನಿರ್ಮಾಣವಾಗಬೇಕು’ ಎಂದು ರಕ್ಷಿತಾ ಸಿದ್ದರಾಜು ಅಭಿಪ್ರಾಯಪಟ್ಟರು.</p><p><strong>‘ಹಣಕ್ಕೆ ಪೀಡಿಸುತ್ತಾರೆ’</strong></p><p>‘ಲಿಂಗತ್ವ ಅಲ್ಪಸಂಖ್ಯಾತರು ಹಣಕ್ಕಾಗಿ ಪೀಡಿಸುತ್ತಾರೆ. ನಿರ್ಲಕ್ಷಿಸಿ ಮುಂದೆ ಸಾಗಿದರೂ ಬಿಡದೇ ಕೈಹಿಡಿದು ಎಳೆದಾಡಿ ಬಲವಂತದಿಂದ ಹಣ ವಸೂಲಿ ಮಾಡುತ್ತಾರೆ. ಇಂಥವರಿಂದ ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕು’ ಎಂದು ಪಾದಚಾರಿ ಹೇಮಂತ್ ಜಿ.ಎಸ್. ಆಗ್ರಹಿಸಿದರು.</p><p>‘ಒಂದೆಡೆ ಭಿಕ್ಷಾಟನೆ ಮಾಡುವವರ ಕಾಟ. ಮತ್ತೊಂದೆಡೆ ಲೈಂಗಿಕ ಕಾರ್ಯಕರ್ತೆಯರ ಹಾವಳಿ. ಇದರಿಂದ ಉಸಿರುಗಟ್ಟುವ ವಾತಾವರಣ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<div><blockquote>ಸಿ.ಸಿ.ಟಿ.ವಿ ಕ್ಯಾಮೆರಾಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಸೂಕ್ತ ನಿರ್ವಹಣೆ ಆಗಬೇಕು</blockquote><span class="attribution">ನೂರ್ ಮೊಹಮ್ಮದ್, ಬಟ್ಟೆ ವ್ಯಾಪಾರಿ</span></div>.<div><blockquote>ಸಂಯೋಜಿತ ವ್ಯಾಪಾರ ವ್ಯವಸ್ಥೆ ಕಲ್ಪಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಟೈಲ್ಸ್ ಬದಲಿಸಬೇಕು. ಚಾವಣಿ ಮತ್ತು ಗೋಡೆಗಳಿಗೆ ಸುಣ್ಣಬಣ್ಣ ಬಳಿಯಬೇಕು</blockquote><span class="attribution">ಶರತ್ ಕೆ.ಆರ್., ಪ್ರಯಾಣಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>