‘ಈ ಹಿಂದೆಯೇ ಬಸವನಗುಡಿಯ ರಸ್ತೆಯಲ್ಲಿನ ಗುಂಡಿಗಳ ಕುರಿತು ವಿಡಿಯೊ ಮಾಡಲಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಈಗ ಅದರ ಪಕ್ಕದಲ್ಲಿಯೇ ಮತ್ತೆ ಗುಂಡಿ ನಿರ್ಮಾಣವಾಗುತ್ತಿವೆ. ಗುಂಡಿ ಮುಚ್ಚುವ ನಿಯಮದಂತೆ ಚೌಕ ಅಥವಾ ಆಯತಕಾರವಾಗಿ ಗುಂಡಿಯನ್ನು ಕತ್ತರಿಸಿ ಅದಕ್ಕೆ ಬಿಟುಮಿನ್ ಮಿಕ್ಸ್ ಹಾಕಿ ದುರಸ್ತಿ ಮಾಡಬೇಕು. ಅದಕ್ಕೂ ಮುನ್ನ ಗುಂಡಿಯಲ್ಲಿನ ತೇವಾಂಶ, ಮಣ್ಣು, ಕಲ್ಲುಗಳನ್ನು ತೆಗೆಯಬೇಕು. ಆದರೆ, ಈ ನಿಯಮವನ್ನು ಪಾಲಿಸುತ್ತಿಲ್ಲ’ ಎಂದು ಆರೋಪಿಸಿದರು.