‘ಮಲ್ಲೇಶ್ವರದಲ್ಲಿ ಈ ಮಳಿಗೆ ಉದ್ಘಾಟನೆಯೊಂದಿಗೆ ಕರ್ನಾಟಕದಲ್ಲಿ ನಮ್ಮ ಕಂಪನಿಯ ಅಸ್ತಿತ್ವವು ಮತ್ತಷ್ಟು ಬಲಿಷ್ಠಗೊಂಡಿದೆ. ಮಳಿಗೆಗಳ ಸಂಖ್ಯೆ ಮತ್ತು ಚಿನ್ನಾಭರಣಗಳ ಮಾರಾಟದ ನಿಟ್ಟಿನಲ್ಲಿ ನಾವು ವಿಶ್ವದ ನಂಬರ್ ಒನ್ ಚಿನ್ನಾಭರಣ ಮಾರಾಟ ಕಂಪನಿ ಆಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದರು.