<p><strong>ಬೆಂಗಳೂರು</strong>: ದೇಶದ ಪ್ರತಿಷ್ಠಿತ ವಜ್ರ ಮತ್ತು ಚಿನ್ನಾಭರಣಗಳ ಮಾರಾಟ ಕಂಪನಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ನೂತನ ಮಳಿಗೆ ನಗರದ ಕಮ್ಮನಹಳ್ಳಿಯಲ್ಲಿ ಕಾರ್ಯಾರಂಭ ಮಾಡಿದೆ. ಕಂಪನಿಯ ಮುಖ್ಯಸ್ಥ ಎಂಪಿ. ಅಹಮ್ಮದ್ ವರ್ಚುವಲ್ ರೂಪದಲ್ಲಿ ಈ ಮಳಿಗೆಯನ್ನು ಉದ್ಘಾಟಿಸಿದರು.</p>.<p>ನಗರದ ಕಮ್ಮನಹಳ್ಳಿಯ ಪ್ರೆಸ್ಟೀಜ್ ಉತ್ತರ ಭಾಗದಲ್ಲಿರುವ ಇದು ನಗರದಲ್ಲಿರುವ ಮಲಬಾರ್ ಕಂಪನಿಯ ಎಂಟನೇ ಮಳಿಗೆ. ಈ ಶಾಖೆಯ ಮೂಲಕ ರಾಜ್ಯದಲ್ಲಿ ಮಲಬಾರ್ ಕಂಪನಿಗಳ ಮಳಿಗೆಗಳ ಸಂಖ್ಯೆ 24ಕ್ಕೆ ಏರಿದೆ.</p>.<p>ಆಧುನಿಕ ಮತ್ತು ವಿಭಿನ್ನ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹ ಈ ಮಳಿಗೆಯಲ್ಲಿದೆ. ಚಿನ್ನಾಭರಣ ವಿಮೆ, ಪ್ರಮಾಣೀಕೃತ ವಜ್ರಗಳು, ಶೇ 100ರಷ್ಟು ಬಿಐಎಸ್ ಹಾಲ್ಮಾರ್ಕ್ ಹೊಂದಿರುವ ಚಿನ್ನ, ಬೆಲೆ ಮತ್ತು ಗುಣಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.</p>.<p>ಹಳೆಯ ಚಿನ್ನಾಭರಣಗಳನ್ನು ಗರಿಷ್ಠ ಬೆಲೆ ನೀಡಿ ಕೊಂಡುಕೊಳ್ಳಲಾಗುತ್ತದೆ. ಗ್ರಾಹಕರು ಶೇ 10ರಷ್ಟು ಮುಂಗಡ ಹಣ ಪಾವತಿಸಿ ಆಭರಣಗಳನ್ನು ಕಾಯ್ದಿರಿಸಬಹುದು ಎಂದೂ ಕಂಪನಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೇಶದ ಪ್ರತಿಷ್ಠಿತ ವಜ್ರ ಮತ್ತು ಚಿನ್ನಾಭರಣಗಳ ಮಾರಾಟ ಕಂಪನಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ನೂತನ ಮಳಿಗೆ ನಗರದ ಕಮ್ಮನಹಳ್ಳಿಯಲ್ಲಿ ಕಾರ್ಯಾರಂಭ ಮಾಡಿದೆ. ಕಂಪನಿಯ ಮುಖ್ಯಸ್ಥ ಎಂಪಿ. ಅಹಮ್ಮದ್ ವರ್ಚುವಲ್ ರೂಪದಲ್ಲಿ ಈ ಮಳಿಗೆಯನ್ನು ಉದ್ಘಾಟಿಸಿದರು.</p>.<p>ನಗರದ ಕಮ್ಮನಹಳ್ಳಿಯ ಪ್ರೆಸ್ಟೀಜ್ ಉತ್ತರ ಭಾಗದಲ್ಲಿರುವ ಇದು ನಗರದಲ್ಲಿರುವ ಮಲಬಾರ್ ಕಂಪನಿಯ ಎಂಟನೇ ಮಳಿಗೆ. ಈ ಶಾಖೆಯ ಮೂಲಕ ರಾಜ್ಯದಲ್ಲಿ ಮಲಬಾರ್ ಕಂಪನಿಗಳ ಮಳಿಗೆಗಳ ಸಂಖ್ಯೆ 24ಕ್ಕೆ ಏರಿದೆ.</p>.<p>ಆಧುನಿಕ ಮತ್ತು ವಿಭಿನ್ನ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹ ಈ ಮಳಿಗೆಯಲ್ಲಿದೆ. ಚಿನ್ನಾಭರಣ ವಿಮೆ, ಪ್ರಮಾಣೀಕೃತ ವಜ್ರಗಳು, ಶೇ 100ರಷ್ಟು ಬಿಐಎಸ್ ಹಾಲ್ಮಾರ್ಕ್ ಹೊಂದಿರುವ ಚಿನ್ನ, ಬೆಲೆ ಮತ್ತು ಗುಣಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.</p>.<p>ಹಳೆಯ ಚಿನ್ನಾಭರಣಗಳನ್ನು ಗರಿಷ್ಠ ಬೆಲೆ ನೀಡಿ ಕೊಂಡುಕೊಳ್ಳಲಾಗುತ್ತದೆ. ಗ್ರಾಹಕರು ಶೇ 10ರಷ್ಟು ಮುಂಗಡ ಹಣ ಪಾವತಿಸಿ ಆಭರಣಗಳನ್ನು ಕಾಯ್ದಿರಿಸಬಹುದು ಎಂದೂ ಕಂಪನಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>