ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಮನಹಳ್ಳಿ: ಮಲಬಾರ್ ನೂತನ ಮಳಿಗೆ ಉದ್ಘಾಟನೆ

Last Updated 23 ನವೆಂಬರ್ 2020, 20:54 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರತಿಷ್ಠಿತ ವಜ್ರ ಮತ್ತು ಚಿನ್ನಾಭರಣಗಳ ಮಾರಾಟ ಕಂಪನಿ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ನ ನೂತನ ಮಳಿಗೆ ನಗರದ ಕಮ್ಮನಹಳ್ಳಿಯಲ್ಲಿ ಕಾರ್ಯಾರಂಭ ಮಾಡಿದೆ. ಕಂಪನಿಯ ಮುಖ್ಯಸ್ಥ ಎಂಪಿ. ಅಹಮ್ಮದ್‌ ವರ್ಚುವಲ್‌ ರೂಪದಲ್ಲಿ ಈ ಮಳಿಗೆಯನ್ನು ಉದ್ಘಾಟಿಸಿದರು.

ನಗರದ ಕಮ್ಮನಹಳ್ಳಿಯ ಪ್ರೆಸ್ಟೀಜ್‌ ಉತ್ತರ ಭಾಗದಲ್ಲಿರುವ ಇದು ನಗರದಲ್ಲಿರುವ ಮಲಬಾರ್ ಕಂಪನಿಯ ಎಂಟನೇ ಮಳಿಗೆ. ಈ ಶಾಖೆಯ ಮೂಲಕ ರಾಜ್ಯದಲ್ಲಿ ಮಲಬಾರ್ ಕಂಪನಿಗಳ ಮಳಿಗೆಗಳ ಸಂಖ್ಯೆ 24ಕ್ಕೆ ಏರಿದೆ.

ಆಧುನಿಕ ಮತ್ತು ವಿಭಿನ್ನ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹ ಈ ಮಳಿಗೆಯಲ್ಲಿದೆ. ಚಿನ್ನಾಭರಣ ವಿಮೆ, ಪ್ರಮಾಣೀಕೃತ ವಜ್ರಗಳು, ಶೇ 100ರಷ್ಟು ಬಿಐಎಸ್‌ ಹಾಲ್‌ಮಾರ್ಕ್ ಹೊಂದಿರುವ ಚಿನ್ನ, ಬೆಲೆ ಮತ್ತು ಗುಣಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಹಳೆಯ ಚಿನ್ನಾಭರಣಗಳನ್ನು ಗರಿಷ್ಠ ಬೆಲೆ ನೀಡಿ ಕೊಂಡುಕೊಳ್ಳಲಾಗುತ್ತದೆ. ಗ್ರಾಹಕರು ಶೇ 10ರಷ್ಟು ಮುಂಗಡ ಹಣ ಪಾವತಿಸಿ ಆಭರಣಗಳನ್ನು ಕಾಯ್ದಿರಿಸಬಹುದು ಎಂದೂ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT