ಪ್ರವಾಸಕ್ಕೆ ಹೋಗಿದ್ದ ಉದ್ಯಮಿ ಕುಟುಂಬ: ‘ಇಂದಿರಾನಗರದಲ್ಲಿ ಐಷಾರಾಮಿ ಮನೆಯಲ್ಲಿ ನೆಲೆಸಿರುವ ಎಂಜಿನಿಯರ್ ಕುಟುಂಬ, ಪ್ರವಾಸ ಕ್ಕೆಂದು ಇತ್ತೀಚೆಗೆ ಬೇರೆ ಊರಿಗೆ ಹೋಗಿತ್ತು. ಹೀಗಾಗಿ, ಮನೆಗೆ ಬೀಗ ಹಾಕಲಾಗಿತ್ತು. ಇಂದಿರಾನಗರದಲ್ಲಿ ಸುತ್ತಾಡಿದ್ದ ದಿಲೀಪ್ಕುಮಾರ್, ಬೀಗ ಹಾಕಿದ್ದ ಎಂಜಿನಿಯರ್ ಮನೆ ಗುರುತಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದನೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ಹೇಳಿದರು.