‘ಕಚೇರಿಯಲ್ಲಿ ಅಳವಡಿಸಿದ್ದ ಅಲಾರಾಂ ಶಬ್ದ ಮಾಡಲಾರಂಭಿಸಿತ್ತು. ಕಳ್ಳರು ಅಲ್ಲಿಂದ ಓಡಿಹೋಗಿದ್ದರು. ಕಚೇರಿಯ ವಲಯ ವ್ಯವಸ್ಥಾಪಕರ ಮೊಬೈಲ್ಗೆ ತುರ್ತು ಸಂದೇಶ ಹೋಗಿತ್ತು. ನಸುಕಿನ 5ರ ಸುಮಾರಿಗೆ ಕೃಷ್ಣ ಅವರು ಕಚೇರಿಗೆ ಹೋಗಿ ನೋಡಿದಾಗ ಶೆಟರ್ ತೆರೆದಿದ್ದು ಕಂಡಿತ್ತು. ಪರಿಶೀಲನೆ ನಡೆಸಿದಾಗ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲವೆಂಬುದು ತಿಳಿಯಿತು’ ಎಂದಿದ್ದಾರೆ.