<p><strong>ಬೆಂಗಳೂರು</strong>: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 43 ವರ್ಷದ ವ್ಯಕ್ತಿಗೆ ನಗರದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.</p>.<p>ಕೋಲ್ಕತ್ತದ ರೋಗಿಗೆ ಮೂತ್ರಪಿಂಡದ ಶೀಘ್ರ ಕಸಿ ಮಾಡುವ ಅಗತ್ಯವಿತ್ತು. ರಕ್ತದ ಕೊರತೆ ಉಂಟಾದಾಗ ಆಸ್ಪತ್ರೆಯ ವೈದ್ಯರೇ ಮುಂದೆ ಬಂದು ರಕ್ತದಾನ ಮಾಡಿದರು.</p>.<p>ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಮೂತ್ರಪಿಂಡ ತಜ್ಞ ಡಾ.ರವಿ ಜಂಗಮಣಿ, ಡಾ.ದೀಪಕ್ ದುಬೆ, ಡಾ.ಶಿವಶಂಕರ್, ಡಾ.ಸೋಮಣ್ಣ, ಸಿಟಿವಿಎಸ್ ಶಸ್ತ್ರಕ್ರಿಯಾ ತಜ್ಞ ಡಾ.ದೇವಾನಂದ, ಅರಿವಳಿಕೆ ತಜ್ಞ ಡಾ.ನವನೀತನ್ ಇದ್ದರು.</p>.<p>‘ರೋಗಿಯ ರಕ್ತನಾಳಗಳು ರೋಗಗ್ರಸ್ತವಾಗಿ, ಕೃತಕ ಕಸಿ ಅನಿವಾರ್ಯವಾಗಿತ್ತು. ಜೊತೆಗೆ ಅವರ ರಕ್ತನಾಳಗಳು ಹಾಳಾಗಿದ್ದು, ದೇಹದ ಕೆಳಭಾಗಕ್ಕೆ ರಕ್ತ ಪೂರೈಕೆ ಕಳಪೆ ಮಟ್ಟದಲ್ಲಿತ್ತು. ಇದರಿಂದ ಮೂತ್ರಪಿಂಡ ಕಸಿ ಕಷ್ಟಕರವಾಗಿತ್ತು. ವಾರಕ್ಕೆ ನಾಲ್ಕು ಬಾರಿ ಡಯಾಲಿಸಿಸ್ ಮಾಡಬೇಕಾಯಿತು’ ಎಂದು ಡಾ.ದೀಪಕ್ ದುಬೆ ತಿಳಿಸಿದರು.</p>.<p>ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ‘ಎರಡು ಹಂತಗಳಲ್ಲಿ ಕಸಿ ಪ್ರಕ್ರಿಯೆ ನಡೆಯಿತು. ಮೊದಲ ಹಂತದಲ್ಲಿ ಬದಲಿ ಮೂತ್ರಪಿಂಡ ಅಳವಡಿಸಲು ಸ್ಥಳಾವಕಾಶ ಕಲ್ಪಿಸಲಾಯಿತು. ನಂತರ ಕೆಟ್ಟಿದ್ದ ಅವರ ರಕ್ತನಾಳ ಸರಿಪಡಿಸಿ, ಮೂತ್ರಪಿಂಡ ಕಸಿ ನಡೆಸಿದೆವು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 43 ವರ್ಷದ ವ್ಯಕ್ತಿಗೆ ನಗರದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.</p>.<p>ಕೋಲ್ಕತ್ತದ ರೋಗಿಗೆ ಮೂತ್ರಪಿಂಡದ ಶೀಘ್ರ ಕಸಿ ಮಾಡುವ ಅಗತ್ಯವಿತ್ತು. ರಕ್ತದ ಕೊರತೆ ಉಂಟಾದಾಗ ಆಸ್ಪತ್ರೆಯ ವೈದ್ಯರೇ ಮುಂದೆ ಬಂದು ರಕ್ತದಾನ ಮಾಡಿದರು.</p>.<p>ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಮೂತ್ರಪಿಂಡ ತಜ್ಞ ಡಾ.ರವಿ ಜಂಗಮಣಿ, ಡಾ.ದೀಪಕ್ ದುಬೆ, ಡಾ.ಶಿವಶಂಕರ್, ಡಾ.ಸೋಮಣ್ಣ, ಸಿಟಿವಿಎಸ್ ಶಸ್ತ್ರಕ್ರಿಯಾ ತಜ್ಞ ಡಾ.ದೇವಾನಂದ, ಅರಿವಳಿಕೆ ತಜ್ಞ ಡಾ.ನವನೀತನ್ ಇದ್ದರು.</p>.<p>‘ರೋಗಿಯ ರಕ್ತನಾಳಗಳು ರೋಗಗ್ರಸ್ತವಾಗಿ, ಕೃತಕ ಕಸಿ ಅನಿವಾರ್ಯವಾಗಿತ್ತು. ಜೊತೆಗೆ ಅವರ ರಕ್ತನಾಳಗಳು ಹಾಳಾಗಿದ್ದು, ದೇಹದ ಕೆಳಭಾಗಕ್ಕೆ ರಕ್ತ ಪೂರೈಕೆ ಕಳಪೆ ಮಟ್ಟದಲ್ಲಿತ್ತು. ಇದರಿಂದ ಮೂತ್ರಪಿಂಡ ಕಸಿ ಕಷ್ಟಕರವಾಗಿತ್ತು. ವಾರಕ್ಕೆ ನಾಲ್ಕು ಬಾರಿ ಡಯಾಲಿಸಿಸ್ ಮಾಡಬೇಕಾಯಿತು’ ಎಂದು ಡಾ.ದೀಪಕ್ ದುಬೆ ತಿಳಿಸಿದರು.</p>.<p>ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ‘ಎರಡು ಹಂತಗಳಲ್ಲಿ ಕಸಿ ಪ್ರಕ್ರಿಯೆ ನಡೆಯಿತು. ಮೊದಲ ಹಂತದಲ್ಲಿ ಬದಲಿ ಮೂತ್ರಪಿಂಡ ಅಳವಡಿಸಲು ಸ್ಥಳಾವಕಾಶ ಕಲ್ಪಿಸಲಾಯಿತು. ನಂತರ ಕೆಟ್ಟಿದ್ದ ಅವರ ರಕ್ತನಾಳ ಸರಿಪಡಿಸಿ, ಮೂತ್ರಪಿಂಡ ಕಸಿ ನಡೆಸಿದೆವು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>