‘ಭಾರತಕ್ಕೆ ಬರುತ್ತಿರುವುದಾಗಿ ಫೆ.23ರಂದು ಆತ ತಿಳಿಸಿದ್ದ. ಅದೇ ದಿನ ವಿದೇಶಿ ನೋಂದಣಿ ವಿಭಾಗದ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ದೀಪಾ ಶರ್ಮಾ ಎಂಬಾಕೆ, ‘ಇಂಗ್ಲೆಂಡ್ನಿಂದ ಬಂದಿರುವ ಅಬ್ದುಲ್ ಇದ್ರಿಸ್ ವಿಮಾನ ನಿಲ್ದಾಣದಲ್ಲಿದ್ದಾರೆ. ಅವರ ಕ್ರೆಡಿಟ್ ಕಾರ್ಡ್ ಕೆಲಸ ಮಾಡುತ್ತಿಲ್ಲ. ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ. ನಿಮ್ಮ ಬಳಿ ಹಣ ಕೇಳುವಂತೆ ಹೇಳಿದ್ದಾರೆ’ ಎಂದಿದ್ದಳು. ಅದನ್ನು ನಂಬಿ ಆಕೆ ಹೇಳಿದ್ದ ಬ್ಯಾಂಕ್ ಖಾತೆಗೆ ₹ 1.34 ಲಕ್ಷ ಜಮೆ ಮಾಡಿದ್ದೆ. ಅದಾದ ಬಳಿಕ ಇಬ್ಬರೂ ನಾಪತ್ತೆ ಆಗಿದ್ದಾರೆ’ ಎಂದು ಮಹಿಳೆ ಹೇಳಿದ್ದಾರೆ.