'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ ಸುತ್ತಲಿನವಿದ್ಯಮಾನಗಳಗಿಂತಲೂ ನಮ್ಮೊಳಗೆ ನಾವು ಮಾತನಾಡುವ ಅಗತ್ಯವಿದೆ. ಎಲ್ಲವೂ ನಮ್ಮದು ಎನ್ನುವುದು ಒಳ್ಳೆಯದು. ಆದರೆ, ಅದು ಸಕಾರಣಕ್ಕೆ ಇರಬೇಕು. ಹಿಂದೆ ಕೂಡು ಕುಟುಂಬಗಳಿದ್ದವು. ಅತ್ಯಂತ ಸಹನೆ, ಸಹಕಾರ, ಸಹಬಾಳ್ವೆ ಕಲಿಸುತ್ತಿದ್ದವು. ವ್ಯಕ್ತಿಯ ಕೋಪ-ತಾಪ-ಅವಸರಗಳನ್ನು ನಿಯಂತ್ರಿಸುತ್ತಿದ್ದವು. ಹೀಗಾಗಿ, ಈ ವ್ಯವಸ್ಥೆ ಮಹತ್ವ ಪಡೆದಿತ್ತು. ಇಂದು ಪರಿಸ್ಥಿತಿ ಬದಲಾಗಿದೆ’ ಎಂದರು.