<p><strong>ಬೆಂಗಳೂರು</strong>: ‘ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯಬೇಕು. ಮಾಧ್ಯಮದ ನಾಲಿಗೆಗೆ ಸ್ವಾತಂತ್ರ್ಯವಿರಬಹುದು. ಆದರೆ ವಿವೇಚನೆ ಹೊಂದಿರಬೇಕು. ಸಂಪಾದಕರು, ನಿರೂಪಕರು, ಡಿಜಿಟಲ್ ಪ್ರಭಾವಿಗಳು ಮಾಧ್ಯಮವನ್ನು ಪ್ರಚೋದನೆಗಾಗಿ ಬಳಸಿಕೊಳ್ಳಬಾರದು’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ವಕೀಲರ ವಾಹಿನಿ ‘ಜಸ್ಟೀಸ್ ಕೆ.ಆರ್. ಗೋಪಿವಲ್ಲಭ ಅಯ್ಯಂಗಾರ್ ಸ್ಮಾರಕ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಸ್ವಯಂ ನಿಯಂತ್ರಣ ನಡುವಿನ ಸಮತೋಲನ‘ ಕುರಿತು ಅವರು ಉಪನ್ಯಾಸ ನೀಡಿದರು.</p>.<p>’ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಇದು ಅಧಿಕಾರವನ್ನು ರಕ್ಷಿಸುವುದಲ್ಲ, ಬದಲಿಗೆ ಆಲೋಚನೆಗಳನ್ನು ಪ್ರಚೋದಿಸಬೇಕು. ಆದರೆ ಪ್ರಚೋದನಕಾರಿ ಯಾಗಬಾರದು. ಸ್ವಾತಂತ್ರ್ಯವನ್ನು ಉತ್ತೇಜಿಸುವ ಜೊತೆಗೆ ನಿಷ್ಠುರವಾಗಿರಬೇಕು ಮತ್ತು ಸಮತೋಲನ ಕಾಯ್ದುಕೊಳ್ಳಬೇಕು’ ಎಂದರು<br><br> ‘ಮಾಧ್ಯಮಗಳು ತನಿಖಾ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಹಾಗೆಂದು ತೀರ್ಪು ನೀಡಬಾರದು. ಪತ್ರಿಕೋದ್ಯಮ ಎಂದರೆ ಸತ್ಯ ಪರಿಶೋಧನೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಜವಾಬ್ದಾರಿತನದಿಂದ ಮುನ್ನಡೆಯಬೇಕು. ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು‘ ಎಂದು ವಿವರಿಸಿದರು.</p>.<p>‘ಮಾಧ್ಯಮ ಸ್ವಾತಂತ್ರ್ಯ ಎಂದರೆ ಅದು ಸಂವಿಧಾನದ ನೈತಿಕತೆಯಾಗಿದ್ದು, ಅದು ಕಾನೂನಿನ ಹಕ್ಕು ಅಲ್ಲ. ಅದು ನೈತಿಕತೆಯನ್ನು ಕಾಪಾಡಿಕೊಂಡು ಹೋಗುವಂತಿರಬೇಕು. ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು’ ಎಂದು ವಿಶ್ಲೇಷಿಸಿದರು.<br /><br /> ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರ ಮೊಮ್ಮಗಳು ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾಮೂರ್ತಿ ಮಾತನಾಡಿ, ‘ಗೋಪಿ ವಲ್ಲಭ ಅಯ್ಯಂಗಾರ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಭವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ತಪ್ಪು ಮಾಡಿದ್ದರೆ ಅದನ್ನು ಅರ್ಥಮಾಡಿಕೊಂಡು ನಾವೇ ತಿದ್ದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು’ ಎಂದರು. <br /><br /> ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ್ ಹೊಳ್ಳ ಮಾತನಾಡಿದರು. ವಕೀಲರ ವಾಹಿನಿಯ ಡಿ.ಎಂ. ಹೆಗಡೆ, ಎಸ್.ಎನ್. ಪ್ರಶಾಂತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯಬೇಕು. ಮಾಧ್ಯಮದ ನಾಲಿಗೆಗೆ ಸ್ವಾತಂತ್ರ್ಯವಿರಬಹುದು. ಆದರೆ ವಿವೇಚನೆ ಹೊಂದಿರಬೇಕು. ಸಂಪಾದಕರು, ನಿರೂಪಕರು, ಡಿಜಿಟಲ್ ಪ್ರಭಾವಿಗಳು ಮಾಧ್ಯಮವನ್ನು ಪ್ರಚೋದನೆಗಾಗಿ ಬಳಸಿಕೊಳ್ಳಬಾರದು’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ವಕೀಲರ ವಾಹಿನಿ ‘ಜಸ್ಟೀಸ್ ಕೆ.ಆರ್. ಗೋಪಿವಲ್ಲಭ ಅಯ್ಯಂಗಾರ್ ಸ್ಮಾರಕ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಸ್ವಯಂ ನಿಯಂತ್ರಣ ನಡುವಿನ ಸಮತೋಲನ‘ ಕುರಿತು ಅವರು ಉಪನ್ಯಾಸ ನೀಡಿದರು.</p>.<p>’ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಇದು ಅಧಿಕಾರವನ್ನು ರಕ್ಷಿಸುವುದಲ್ಲ, ಬದಲಿಗೆ ಆಲೋಚನೆಗಳನ್ನು ಪ್ರಚೋದಿಸಬೇಕು. ಆದರೆ ಪ್ರಚೋದನಕಾರಿ ಯಾಗಬಾರದು. ಸ್ವಾತಂತ್ರ್ಯವನ್ನು ಉತ್ತೇಜಿಸುವ ಜೊತೆಗೆ ನಿಷ್ಠುರವಾಗಿರಬೇಕು ಮತ್ತು ಸಮತೋಲನ ಕಾಯ್ದುಕೊಳ್ಳಬೇಕು’ ಎಂದರು<br><br> ‘ಮಾಧ್ಯಮಗಳು ತನಿಖಾ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಹಾಗೆಂದು ತೀರ್ಪು ನೀಡಬಾರದು. ಪತ್ರಿಕೋದ್ಯಮ ಎಂದರೆ ಸತ್ಯ ಪರಿಶೋಧನೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಜವಾಬ್ದಾರಿತನದಿಂದ ಮುನ್ನಡೆಯಬೇಕು. ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು‘ ಎಂದು ವಿವರಿಸಿದರು.</p>.<p>‘ಮಾಧ್ಯಮ ಸ್ವಾತಂತ್ರ್ಯ ಎಂದರೆ ಅದು ಸಂವಿಧಾನದ ನೈತಿಕತೆಯಾಗಿದ್ದು, ಅದು ಕಾನೂನಿನ ಹಕ್ಕು ಅಲ್ಲ. ಅದು ನೈತಿಕತೆಯನ್ನು ಕಾಪಾಡಿಕೊಂಡು ಹೋಗುವಂತಿರಬೇಕು. ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು’ ಎಂದು ವಿಶ್ಲೇಷಿಸಿದರು.<br /><br /> ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರ ಮೊಮ್ಮಗಳು ಮತ್ತು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾಮೂರ್ತಿ ಮಾತನಾಡಿ, ‘ಗೋಪಿ ವಲ್ಲಭ ಅಯ್ಯಂಗಾರ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಭವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ತಪ್ಪು ಮಾಡಿದ್ದರೆ ಅದನ್ನು ಅರ್ಥಮಾಡಿಕೊಂಡು ನಾವೇ ತಿದ್ದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು’ ಎಂದರು. <br /><br /> ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ್ ಹೊಳ್ಳ ಮಾತನಾಡಿದರು. ವಕೀಲರ ವಾಹಿನಿಯ ಡಿ.ಎಂ. ಹೆಗಡೆ, ಎಸ್.ಎನ್. ಪ್ರಶಾಂತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>