ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ನೂರಾರು ಬಿಸಿಯೂಟ ಕಾರ್ಯಕರ್ತರು ಮೆರವಣಿಗರ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ತೆರಳಿದರು. ಪ್ರತಿಭಟನಾ ಮೆರವಣಿಗೆಯಿಂದ ಮೆಜೆಸ್ಟಿಕ್, ಗಾಂಧಿನಗರ, ಆನಂದ ರಾವ್ ವೃತ್ತದ ಬಳಿ ಸಂಚಾರ ದಟ್ಡಣೆ ಉಂಟಾಗಿದೆ. ಪ್ರತಿಭಟನೆ ಎರಡು ದಿನ ನಡೆಯಲಿರುವುದರಿಂದ,ಎರಡು ದಿನಕ್ಕೆ ಅಗತ್ಯವಾದ ಉಪಹಾರ ಮತ್ತು ಹೊದಿಕೆ ತರುವಂತೆ ಸಂಘಟಕರು ಸೂಚಿಸಿದ್ದಾರೆ.