‘ಪ್ರಧಾನಿ ನರೇಂದ್ರ ಮೋದಿ ಎಂಎಸ್ಎಂಇಗೆ ₹ 3 ಲಕ್ಷ ಕೋಟಿ ಕೊಡುತ್ತೇವೆ ಎಂದಿದ್ದಾರೆ. ಆದರೆ, ಅದು ಸಹಾಯಧನ ಅಲ್ಲ. ಅನುದಾನವೂ ಅಲ್ಲ. ಸಾಲ ಪಡೆಯಲು ಅಷ್ಟೆ. ಕನಿಷ್ಠ ವೇತನ ಮತ್ತು ವ್ಯತ್ಯಸ್ಥ ತುಟ್ಟಿ ಭತ್ಯೆ ವಿಷಯದಲ್ಲಿ ಕಾರ್ಮಿಕರು ನಮ್ಮ ಜೊತೆ ಕೈಜೋಡಿಸಬೇಕು. ಕನಿಷ್ಠ ಒಂದು ವರ್ಷ ಕಾರ್ಮಿಕ ಕಾಯ್ದೆಗಳನ್ನೆಲ್ಲ ಮುಂದೂಡಬೇಕು. ಇಲ್ಲದಿದ್ದರೆ, ಈಗಾಗಲೇ ಶೇ 10ರಷ್ಟು ಕೈಗಾರಿಕೆಗಳು ಮುಚ್ಚಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ 25ಕ್ಕೆ ಏರಿಕೆ ಆಗಲಿದೆ’ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಹೇಳಿದರು.