ಎಫ್ಐಆರ್ ಬಗ್ಗೆ ಪ್ರತಿಕ್ರಿ ಯಿಸಿದ ವರಲಕ್ಷ್ಮಿ, ‘4ತಿಂಗಳಿನಿಂದ ಸಂಬಳ ಬಂದಿಲ್ಲ. ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ, ಸಂಬಳ ಕೇಳಲು ಸಚಿ ವರ ಮನೆ ಬಳಿ ಹೋಗಿದ್ದೆವು. ಯಾವುದೇ ಗಲಾಟೆಯಾಗಲಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಲಿ ನಾವು ಮಾಡಿಲ್ಲ. ಬೆಳಿಗ್ಗೆ 7.30ಕ್ಕೆ ಮನೆಗೆ ಹೋಗಿದ್ದೆವು. ಆದರೆ, ಸಚಿವರು ಇರಲಿಲ್ಲ. ವಿಧಾನಸೌಧಕ್ಕೆ ಹೋಗಿರು ವುದಾಗಿ ಗೊತ್ತಾಯಿತು. ಅವರು ಬೆಳಿಗ್ಗೆಯೇ ಮಾತುಕತೆ ನಡೆಸಿ ವಾಪಸು ಕಳುಹಿಸಬಹುದಿತ್ತು. ಹೀಗೆ, ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ’ ಎಂದು ತಿಳಿಸಿದರು.