ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಮಾಡಿ ಬೇಡಿಕೆ ಸಲ್ಲಿಸಲು ಪ್ರಿಯಾಂಕ್ ಅವರು ಕಳೆದ ವಾರದ ದೆಹಲಿ ಪ್ರವಾಸದ ಸಂದರ್ಭದಲ್ಲಿ ಪ್ರಯತ್ನಿಸಿದ್ದರು. ಆದರೆ, ಗಿರಿರಾಜ್ ಸಿಂಗ್ ಅವರು ಭೇಟಿಗೆ ಸಮಯಾವಕಾಶ ನೀಡಿರಲಿಲ್ಲ. ಕೆಲಸದ ದಿನಗಳ ಹೆಚ್ಚಳ ಹಾಗೂ ನರೇಗ ವೇತನದ ಬಾಕಿ ಮೊತ್ತ ಪಾವತಿಸಬೇಕೆಂಬ ಬೇಡಿಕೆಗಳುಳ್ಳ ಪತ್ರವನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೆ ಸಲ್ಲಿಸಿ ಬಂದಿದ್ದಾರೆ.