ಬೆಂಗಳೂರು:ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ನಿಧನಕ್ಕೆ ಸಚಿವರು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಅವರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಡಾ.ಕೆ. ಸುಧಾಕರ್ ಟ್ವೀಟಿಸಿದ್ದಾರೆ.
ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಅವರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.@prajavani pic.twitter.com/S7xqkJYRC6
— Dr Sudhakar K (@mla_sudhakar) October 18, 2020
ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸುವುದರ ಮೂಲಕ, ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಶಾಸಕಜಿಟಿ ದೇವೇಗೌಡ ಅವರು ಒತ್ತಾಯಿಸಿದ್ದಾರೆ.
ಯುವ ಪತ್ರಕರ್ತರಾದ ಪವನ್ ಹೆತ್ತೂರು ಕೊರೊನಾ ಮಹಮಾರಿಗೆ ಬಲಿಯಾಗಿರುವುದು ನನ್ನ ಮನಸ್ಸಿಗೆ ಅಘಾತವನ್ನುಂಟು ಮಾಡಿದೆ. ವೈದ್ಯರಂತೆ ಪತ್ರಕರ್ತರು ಕೊರೋನಾ ವಾರಿಯರ್ಸ್ ಗಳ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. (1/2)
— GT Devegowda (@GTDevegowda) October 18, 2020
ಜೊತೆಗೆ ಸರ್ಕಾರ ಈ ಕೂಡಲೇ ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸುವುದರ ಮೂಲಕ, ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜೊತೆಗೆ ಕೋವಿಡ್ ಪರಿಹಾರ ನಿಧಿಯ ಅನುಸಾರ ಪವನ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಈ ಮೂಲಕ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ.@KarnatakaVarthe pic.twitter.com/t5USHZwtYU
— GT Devegowda (@GTDevegowda) October 18, 2020
***********
ಯುವ ಪತ್ರಕರ್ತರಾದ ಪವನ್ ಹೆತ್ತೂರು ಅವರ ಅಕಾಲಿಕ ನಿಧನ ತೀವ್ರ ಬೇಸರ ತಂದಿದೆ. ಕರೋನಾ ಹೆಮ್ಮಾರಿ ಅವರನ್ನು ಬಲಿ ಪಡೆದಿರುವುದು ನಿಜಕ್ಕೂ ಖೇದಕರ. ಪತ್ರಕರ್ತರು ಕೊರೋನಾ ವಾರಿಯರ್ಸ್ ಆಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಾನು ಈ ಮೂಲಕ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ. ಪವನ್ ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.
-ಎಸ್.ಟಿ.ಸೋಮಶೇಖರ್
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು
**********
ದಿನೇಶ್ ಗಂಡೂರಾವ್ ಸಂತಾಪ
.@prajavani ಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಪವನ್ ಹೆತ್ತೂರು ಕೋವಿಡ್ ನಿಂದ ಸಾವಿಗೀಡಾಗಿರುವುದು ದುರ್ದೈವದ ಸಂಗತಿ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 18, 2020
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಪತ್ರಕರ್ತರನ್ನೂ ಕೊರೊನಾ ಸೇನಾನಿಗಳು ಎಂದು ಸರ್ಕಾರ ಪರಿಗಣಿಸಬೇಕು.
ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು.
ಪವನ್ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. pic.twitter.com/Vy8BFKrWnP
**********
ಮೈಸೂರು ಪ್ರಜಾವಾಣಿ ವರದಿಗಾರರಾದ ಶ್ರೀ ಪವನ್ ಹೆತ್ತೂರು ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಚಿಕ್ಕ ವಯಸ್ಸಿಗೆ ಅವರು ಅಗಲಿರುವುದು ಅತ್ಯಂತ ದುಃಖ ಉಂಟು ಮಾಡಿದೆ.
ಪ್ರಜಾವಾಣಿ, ಅದಕ್ಕೂ ಹಿಂದೆ ವಿಜಯವಾಣಿ, ಕಸ್ತೂರಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು, ಮಾಧ್ಯಮ ಲೋಕದಲ್ಲಿ ಉತ್ತಮವಾಗಿ ಬೆಳೆಯುವ ಮೂಲಕ ಭರವಸೆ ಮೂಡಿಸಿದ್ದರು. ಸದ್ಯಕ್ಕೆ ಮೈಸೂರಿನ ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್; ಕೋವಿಡ್’ಗೆ ತುತ್ತಾಗಿದ್ದಾರೆ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತಾ ಎಲ್ಲ ಪತ್ರಕರ್ತ ಮಿತ್ರರು ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ.
- ಡಾ.ಸಿ.ಎನ್ ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ
*********
ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಕೋವಿಡ್ ನಿಂದ ಸಾವಿಗೀಡಾಗಿರುವುದು ಬೇಸರದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಅವರ ಆಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನಲ್ಲಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/PlSkRrm1FL
— Iranna Kadadi-MP (@IrannaKadadiMP) October 18, 2020
ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಪತ್ರಕರ್ತರಾಗಿದ್ದ ಪವನ್ ಹೆತ್ತೂರು ಮೈಸೂರು @prajavani ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು pic.twitter.com/FkwvUqIkXb
— Dr. Syed Roshan Abbas (@DrRoshanAbbas) October 18, 2020
ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಪತ್ರಕರ್ತರಾಗಿದ್ದ ಪವನ್ ಹೆತ್ತೂರು ಮೈಸೂರು @prajavani ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು pic.twitter.com/FkwvUqIkXb
— Dr. Syed Roshan Abbas (@DrRoshanAbbas) October 18, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.